‘ಚಿಕಿತ್ಸಾ ಕೇಂದ್ರಕ್ಕೆ ಹುಣಜಿ (ಕೆ), ನೆಲವಾಡ, ಕಟ್ಟಿ ತೂಗಾಂವ ಗ್ರಾಮಗಳಿಂದ ರೈತರು ದನಗಳಿಗೆ ಚಿಕಿತ್ಸೆ ಕೊಡಿಸಲು ನಿತ್ಯವೂ ಬರುತ್ತಾರೆ. ಆದರೆ, ಮಳೆಗಾಲ ಶುರು ಆದಾಗಿನಿಂದ ಆಗಾಗ್ಗೆ ಚಿಕಿತ್ಸಾ ಕೇಂದ್ರದಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ವೈದ್ಯರಿಗೂ ಕೇಂದ್ರದ ಒಳಗೆ ಹೋಗಲು ಆಗುತ್ತಿಲ್ಲ’ ಎಂದು ಎಂದು ರೈತರಾದ ಹುಲೇಪ್ಪಾ ಮಾನಕಾರ ತಿಳಿಸಿದರು.