ಚಾಮರಾಜನಗರದ ಗುಂಡ್ಲುಪೇಟೆಯಿಂದ ನಗರಕ್ಕೆ ಬಂದಿದ್ದ ಕರೀಂ, ರಿಯಾಜ್ ಹಣ ಕಳೆದುಕೊಂಡಿದ್ದಾರೆ. ಜಮೀನು ಖರೀದಿಗೆ ಅವರು ಹಣವನ್ನು ತೆಗೆದುಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಬೈಕ್ನಲ್ಲಿ ವೇಗವಾಗಿ ಬಂದು ದುಷ್ಕರ್ಮಿಗಳಿಬ್ಬರು ಕಾರನ್ನು ಅಡ್ಡಗಟ್ಟಿ ಹಣ ದೋಚಿದ್ದಾರೆ. ಬಳಿಕ ಕರೀಂ ಅವರು ಠಾಣೆಗೆ ದೂರು ನೀಡಿದ್ದಾರೆ.