ಪಕ್ಷದ ಈ ಅಭಿಯಾನದ ಜೊತೆ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಮನೆ ಮನೆಗೆ ಹೆಜ್ಜೆ ಹಾಕಿರುವ ವೇಣುಗೋಪಾಲ್, ಹುಬ್ಬಳ್ಳಿ– ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲೂ ಹಲವು ಮನೆಗಳ ಕದ ತಟ್ಟಿದ್ದಾರೆ. ಆ ಮೂಲಕ, ಈ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸದ ಸಚಿವರು, ಶಾಸಕರು ಮತ್ತು ಸ್ಥಳೀಯ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.