ಕಲಬುರ್ಗಿ: ಮೂರು ದಿನಗಳಿಂದ ದೀಪಾವಳಿ ಹಬ್ಬದ ಸಡಗರದಲ್ಲಿದ್ದ ನಗರದ ಜನತೆಗೆ ಈಗ ಕಸದ ಸಮಸ್ಯೆ ಎದುರಾಗಿದೆ. ಇಲ್ಲಿನ ಮಾರ್ಕೆಟ್, ಚಪ್ಪಲ್ ಬಜಾರ್, ಕಿರಾಣಾ ಬಜಾರ್, ನೆಹರೂ ಗಂಜ್ ಪ್ರದೇಶದಲ್ಲಿ ಅಂಗಡಿಗಳ ಪೂಜೆಗೆ ಬಳಸಿದ ಬಾಳೆ ದಿಂಡು, ತೆಂಗಿನ ಗರಿಕೆ, ಹೂವಿನ ಹಾರ ಮತ್ತು ಪ್ಲಾಸ್ಟಿಕ್ ವಸ್ತುಗಳು ಕಸದ ತೊಟ್ಟಿಗಳಲ್ಲಿ ತುಂಬಿದೆ.