ದಾಳಿಂಬೆ ಬೆಳೆಗಾರರ ಸಂಕಷ್ಟ: ಕಲಾದಗಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಸತತ ಮಳೆಯಿಂದಾಗಿ ದಾಳಿಂಬೆ ಬೆಳೆಗೆ ರೋಗ ಬಾಧೆ ಎದುರಾಗಿದೆ. ರೋಗ ಹೊಗಲಾಡಿಸಲು ಸಾಕಷ್ಟು ಔಷಧಿ ಸಿಂಪಡಿಸಿ ದಾಳಿಂಬೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಈಗ ಮತ್ತೆ ಮಳೆ ಆರಂಭವಾಗಿರುವುದು ಮತ್ತೆ ಸಂಕಷ್ಟ ತಂದಿಟ್ಟಿದೆ. ದಾಳಿಂಬೆಗೆ ಕಜ್ಜಿರೋಗ ಆವರಿಸಿ ಹಾಳಾಗಿ ಹೋಗಿದೆ. ಅಂತಹ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಬೆಳೆಗಾರ ಸೈಪುದ್ದೀನ್ ನದಾಫ್ ಒತ್ತಾಯಿಸುತ್ತಾರೆ.