22 ರಂದು ಬೀರದೇವರ ಪಲ್ಲಕ್ಕಿಯು ಭಕ್ತರ ಮನೆ ಮನೆಗೆ ಹೋಗಿ ನೈವೇದ್ಯ ಸ್ವೀಕರಿಸಿತು. ಸಂಜೆ ವಾದ್ಯ ಮೇಳಗಳೊಂದಿಗೆ ಕಬ್ಬಿನ ಮೆರವಣಿಗೆ ನಡೆಯಿತು. 23ರಂದು ಮಧ್ಯಾಹ್ನ ಪಲ್ಲಕ್ಕಿಯು ಮಂದಿರ ಪ್ರವೇಶಿಸಿದ ಸಂದರ್ಭದಲ್ಲಿ ಭಕ್ತಾದಿಗಳು ಪಲ್ಲಕ್ಕಿ ಮೇಲೆ ಭಂಡಾರ, ಉತ್ತತ್ತಿ, ಹೂವು, ಕೊಬ್ಬರಿ ಹಾರಿಸಿ ಭಕ್ತಿ ಸೇವೆ ಸಲ್ಲಿಸಿದರು.