ಬೆಂಗಳೂರು: ಭಾರತದಲ್ಲಿ ಎಲ್ಲ ಧರ್ಮದವರೂ ಸೌಹಾರ್ದದಿಂದ ಬಾಳುತ್ತಿದ್ದಾರೆ. ಕ್ರಿಕೆಟ್ ತಂಡದಲ್ಲಿ ಇರುವ ಪ್ರತಿಯೊಬ್ಬ ಆಟಗಾರ ಭಾರತೀಯನಾಗಿದ್ದಾನೆ. ಆವರು ತಮ್ಮ ಪ್ರತಿಭೆಯಿಂದ ಸ್ಥಾನ ಪಡೆದಿದ್ದಾರೆ. ಜಾತಿ, ಧರ್ಮ ಮತ್ತು ವರ್ಣಗಳಿಂದ ಅಲ್ಲ ಎಂದು ಆಫ್ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು, ‘ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರೇಕಿಲ್ಲ? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹೀಗೆ ಎಷ್ಟು ಬಾರಿ ಆಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಹರಭಜನ್ ಪ್ರತಿಕ್ರಿಯಿಸಿದ್ದಾರೆ.