ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಖಜಾಂಚಿ ಆರ್.ನಾಗೇಂದ್ರ ಪ್ರಸಾದ್, ‘28ರಂದು ಮಂಗಳೂರಿನ ಮಣ್ಣಗುಡ್ಡೆಯ ಸಂಘನಿಕೇತನದಿಂದ ಹಾಗೂ 29ರಂದು ಬೆಂಗಳೂರಿನ ಪುರಭವನದಿಂದ ಹೊರಡುವ ವಾಹನ ಜಾಥಾವು ಸಂಜೆ ವೇಳೆಗೆ ಮೈಸೂರು ತಲುಪಲಿದೆ. ಬಳಿಕ ಅಲ್ಲಿನ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ’ ಎಂದರು.