ಪುಣೆ: ‘ನ್ಯೂಜಿಲೆಂಡ್ ವಿರು ದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಮ್ಮ ಬೌಲರ್ಗಳು ಮಿಂಚಿನ ದಾಳಿ ನಡೆಸಿದರು. ಹೀಗಾಗಿ ಗೆಲುವಿನ ಹಾದಿ ಸುಗಮವಾಯಿತು’ ಎಂದು ಭಾರತ ತಂಡದ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ಬುಧವಾರ ಹೊನಲು ಬೆಳ ಕಿನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 6 ವಿಕೆಟ್ಗಳಿಂದ ಗೆದ್ದಿತ್ತು. ಹೀಗಾಗಿ 3 ಪಂದ್ಯಗಳ ಸರಣಿ 1–1ರಲ್ಲಿ ಸಮಬಲವಾಗಿತ್ತು. ಈ ಪಂದ್ಯದಲ್ಲಿ ಧವನ್ 68ರನ್ ಗಳಿಸಿ ಮಿಂಚಿದ್ದರು.
‘ಪುಣೆ ಪಂದ್ಯದ ಗೆಲುವಿನ ಶ್ರೇಯ ಬೌಲರ್ಗಳಿಗೆ ಸಲ್ಲಬೇಕು’ ಎಂದು ಶಿಖರ್ ಧವನ್ ಹೇಳಿದರು.