ವಿಜಯದಾಸರ ಸ್ಮರಣೆಗಾಗಿ ವಿಜಯ ವೈಭವ ಭಜನೆ, ಸಂಕೀರ್ತನೆ ಹಮ್ಮಿಕೊಂಡಿದ್ದರು. ಹಾಗೆಯೇ ಮಠದಲ್ಲಿ ಸಂಸ್ಥಾನ ಪೂಜೆ, ಹಸ್ತೋದಕ ನಡೆಯಿತು. ಸಂಜೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರಾಚಾರ ಗುನ್ನಾಳ, ಶ್ರೀನಿವಾಸರಾವ್ ಕುಲಕರ್ಣಿ, ಅಡವಿರಾವ್ ದೇಸಾಯಿ ವಜ್ರಬಂಡಿ, ವಸಂತರಾವ್ ಕುಲಕರ್ಣಿ, ಶೇಷಗಿರಿರಾವ್ ಪಟವಾರಿ, ರಾಮರಾವ್ ಗಂಗಾಖೇಡ, ಸುದೀರ್ ಕೊರ್ಲಳ್ಳಿ ಇದ್ದರು.