ಶಂಕರನಾರಾಯಣನ್ (ಜನನ: 1945) ಅವರು ತಮ್ಮ ಸೋದರ ಮಾವ ಮಧುರೆ ಮಣಿ ಅಯ್ಯರ್ ಅವರಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತ ಕಲಿತು, 23ನೇ ವಯಸ್ಸಿನಲ್ಲಿ ಪ್ರಥಮ ಕಛೇರಿ ನೀಡಿದರು. ಭಾವ ಪ್ರಧಾನ ಗಾಯನ ಅವರ ವೈಶಿಷ್ಟ್ಯ. ಶ್ರುತಿಶುದ್ಧತೆ ಹಾಗೂ ಸರ್ವಲಘು ಸ್ವರಪ್ರಸ್ತಾರಗಳಿಗೆ ಅವರು ಪ್ರಸಿದ್ಧರು. ‘ಮಧುರೆ ಮಣಿ ಬಾನಿ’ಯ ಶ್ರೇಷ್ಠ ಗಾಯಕ ಎನಿಸಿಕೊಂಡಿದ್ದಾರೆ. ಪದ್ಮಭೂಷಣ, ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ.