ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಕಲ್ಪನೆ ಇಲ್ಲದ ಕೆಂಪಂಗಿಗಳು: ಹೆಗಡೆ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹೊರನಾಡು (ಕಳಸ): ಹೊರನಾಡಿನಲ್ಲಿ ಮಂಗಳವಾರ ಚಿಟ್ಟಾಣಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಎಡಪಂಥೀಯರ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದರು.

‘ಧರ್ಮದ ಮೂಲಭೂತ ಕಲ್ಪನೆ ಇಲ್ಲದೆ ವ್ಯಾಖ್ಯಾನ ಮಾಡುವ ಕೆಂಪಂಗಿಗಳ ಬಗ್ಗೆ ಯಾರೂ ತಲೆಕಡಿಸಿಕೊಳ್ಳಬೇಕಿಲ್ಲ. ಧರ್ಮ ಮತ್ತು ಹಿಂದುತ್ವದ ಬಗ್ಗೆ ಅವರ ಪ್ರಶ್ನೆಗಳೆಲ್ಲ ಮೂರ್ಖತನದ್ದು’ ಎಂದು ಟೀಕಿಸಿದರು.

‘ಸಾವಿರಾರು ವರ್ಷಗಳ ಚಿಂತನ, ವಿಮರ್ಶೆ, ಚರ್ಚೆ ಮತ್ತು ಪರಿಕಲ್ಪನೆಯ ವೈಚಾರಿಕ ಪರಿಪಾಕವೇ ಹಿಂದುತ್ವ’ ಎಂದು ಬಣ್ಣಿಸಿದ ಅವರು, ‘ಎಡ ಪಂಥೀಯರು ಗೀಚುವ ಕವನಕ್ಕಿಂತ ನಮ್ಮ ಹೆಣ್ಣು ಮಕ್ಕಳ ಕವನ ಹೆಚ್ಚು ಪ್ರಬುದ್ಧವಾಗಿರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT