ಸಮ್ಮೇಳನಕ್ಕೆ ನಿರ್ಮಿಸಿದ್ದ ಪೆಂಡಾಲ್, ಭೋಜನಕ್ಕಾಗಿ ಹಾಕಲಾಗಿದ್ದ ಟೆಂಟ್, ಕುರ್ಚಿಗಳನ್ನು ಕಾರ್ಮಿಕರು ಲಾರಿಯಲ್ಲಿ ತುಂಬಿಸಿ ಸಾಗಿಸಿದರು. ಪುಸ್ತಕದ ಮಳಿಗೆಗಳನ್ನು ಬಿಚ್ಚುವುದರಲ್ಲಿ ನಿರತರಾಗಿದ್ದರು. ಫ್ಲೆಕ್ಸ್, ಬ್ಯಾನರ್, ಕಟೌಟ್ಗಳನ್ನು ತೆರವುಗೊಳಿಸಿದರು. ಕಂಬ ನಿಲ್ಲಿಸಲು ಅಲ್ಲಲ್ಲಿ ಗುಂಡಿ ತೋಡಿದ್ದರಿಂದ ಕ್ರೀಡಾಂಗಣಕ್ಕೆ ತುಸು ಧಕ್ಕೆ ಉಂಟಾಗಿದೆ.