ನೂರಾರು ಶ್ರೇಷ್ಠ ದಾರ್ಶನಿಕರಿಗೆ, ಸಾಹಿತಿಗಳಿಗೆ, ವಚನಕಾರರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಕನ್ನಡ ನಾಡಾಗಿದೆ. ಇಲ್ಲಿ ಅನೇಕ ನದಿಗಳು ಹುಟ್ಟಿ ಹರಿಯುತ್ತಿವೆ. ಜಾನಪದ, ಶಿಲ್ಪಕಲೆ, ಸಂಗೀತ, ಸಾಹಿತ್ಯದಿಂದ ಕೂಡಿದ ಸಂಪತ್ ಭರಿತವಾದ ಪ್ರದೇಶ ನಮ್ಮದಾಗಿದೆ. ಜೀವನದಲ್ಲಿ ಒಮ್ಮೆ ನಾಡಿನ ಉದ್ದಗಲಕ್ಕೂ ಸಂಚರಿಸಿ ಅದರ ಸವಿ ಸವಿಯಬೇಕು. ಕನ್ನಡ ಭಾಷೆಯನ್ನು ನಿರ್ಲಕ್ಷಿಸದೇ ನಿತ್ಯ ಮನೆ, ಮನಗಳಲ್ಲಿ ಮಾತನಾಡುತ್ತಿರಬೇಕು ಎಂದು ಸಲಹೆ ನೀಡಿದರು.