ಅಲ್ಲದೆ ಭತ್ತವು ನಿಷೇಧಿತ ಬೆಳೆಯಾಗಿದ್ದರಿಂದ ಬೆಳೆ ನಷ್ಟವನ್ನು ನಾವು ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ರೈತ ಅಮರಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈಗಾಗಲೇ ಆಂಧ್ರವಲಸಿಗರು ಎರಡನೇಯ ಅವಧಿಯ ಭತ್ತದ ಲೀಸ್ ಮೊತ್ತವನ್ನು ನೀಡಲು ಒಪ್ಪುತ್ತಿಲ್ಲ. ನೀರಿನ ಸಮಸ್ಯೆ ಉಂಟಾಗುವ ಆತಂಕ ಇದ್ದು, ಜಮೀನು ಮಾಲೀಕರು ಕಂಗಾಲಾಗಿದ್ದಾರೆ.