ಬೆಂಗಳೂರು: ‘ಜನಾರ್ಶೀವಾದ ಯಾತ್ರೆ ಈಗ ಮಾಡುತ್ತಿಲ್ಲ. ಮಾರ್ಚ್ ಒಂದರಿಂದ ಯಾತ್ರೆ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಈಗ ಯಾತ್ರೆ ಮಾಡುತ್ತಿದ್ದೇನೆ ಎಂದು ಯಾರು ಹೇಳಿದ್ದು ನಿಮಗೆ? ಮಾರ್ಚ್ ಒಂದರಿಂದ ಯಾತ್ರೆ ಮಾಡುತ್ತೇನೆ. ಸದ್ಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೋಗುತ್ತೇನೆ ಅಷ್ಟೆ’ ಎಂದರು.