<p><strong>ಚೆನ್ನೈ</strong>: ಎಐಎಡಿಎಂಕೆಯ ಮುಖ್ಯಸ್ಥೆಯಾಗಿದ್ದ ಜೆ.ಜಯಲಲಿತಾ ಅವರ ಮೊದಲ ಪುಣ್ಯ ತಿಥಿ ಅಂಗವಾಗಿ ಪಕ್ಷದ ಸಾವಿರಾರು ಕಾರ್ಯಕರ್ತರು ಮಂಗಳವಾರ ಚೆನ್ನೈನಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಿದರು.</p>.<p>ಪಕ್ಷದ ಸಂಚಾಲಕ ಒ. ಪನ್ನೀರ್ ಸೆಲ್ವಂ ಮತ್ತು ಸಹ ಸಂಚಾಲಕ ಕೆ. ಪಳನಿಸ್ವಾಮಿ ಅವರು ಇದರ ನೇತೃತ್ವ ವಹಿಸಿದ್ದರು.</p>.<p>ಅಣ್ಣಾಸಾಲೈನಿಂದ ಹೊರಟ ಮೆರವಣಿಗೆ ಮರೀನಾ ಕಡಲ ಕಿನಾರೆಯಲ್ಲಿರುವ ಜಯಾಲಲಿತಾ ಅವರ ಸಮಾಧಿ ಬಳಿ ಕೊನೆಗೊಂಡಿತು.</p>.<p><strong>ಪುಷ್ಪನಮನ:</strong> ಕಪ್ಪು ಬಣ್ಣದ ದಿರಿಸು ಧರಿಸಿದ್ದ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಸೇರಿದಂತೆ ರಾಜ್ಯದ ಸಚಿವರು, ಪಕ್ಷದ ಸಂಸದರು ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಜಯಾಲಲಿತಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.</p>.<p>ಕೆಲವು ಕಾರ್ಯಕರ್ತರು ಜಯಾ ಪರ ಘೋಷಣೆಗಳನ್ನು ಕೂಗುತ್ತಿದ್ದರೆ, ಕೆಲವರು ಅಗಲಿದ ನಾಯಕಿಯನ್ನು ನೆನೆದು ಕಣ್ಣೀರುಗರೆದರು.</p>.<p>ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷದ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕಕ್ಕೂ ನಮನ ಸಲ್ಲಿಸಿದರು.</p>.<p><strong>ಪ್ರತಿಜ್ಞೆ ಸ್ವೀಕಾರ: </strong>‘ಅಮ್ಮ’ ಅವರ ಆಡಳಿತದ ‘ಸುವರ್ಣ ಯುಗ’ವನ್ನು ಮುಂದುವರೆಸುವ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಕಾರ್ಯಕರ್ತರು ಸ್ವೀಕರಿಸಿದರು. ಪನ್ನೀರ್ ಸೆಲ್ವಂ ಅವರು ಈ ಪ್ರತಿಜ್ಞೆಯನ್ನು ಓದಿದರೆ, ಉಳಿದವರು ಅದನ್ನು ಪುನರುಚ್ಚರಿಸಿದರು.</p>.<p><strong>ದಿನಕರನ್ ನಮನ:</strong> ಎಐಎಡಿಎಂಕೆಯ ಮತ್ತೊಂದು ಬಣದ ನಾಯಕ ಟಿ.ಟಿ.ವಿ ದಿನಕರನ್ ಕೂಡ ತಮ್ಮ ಬೆಂಬಲಿಗರೊಂದಿಗೆ ಜಯಾ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.</p>.<p>**</p>.<p><strong>ವಿಶಾಲ್ ನಾಮಪತ್ರ ಅಂಗೀಕೃತ</strong></p>.<p>ನಟ ವಿಶಾಲ್ ಅವರ ನಾಮಪತ್ರವನ್ನು ಒಮ್ಮೆ ತಿರಸ್ಕರಿಸಿದ್ದ ಚುನಾವಣಾ ಆಯೋಗ ಕೊನೆಗೆ ಅಂಗೀಕರಿಸಿದೆ.</p>.<p>ಆರಂಭದಲ್ಲಿ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ವಿಶಾಲ್ ಅವರು ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಬಂದು ಅವರನ್ನು ಬಲವಂತವಾಗಿ ಅಲ್ಲಿಂದ ಕಳುಹಿಸಬೇಕಾಯಿತು.</p>.<p>ಸ್ವಲ್ಪ ಹೊತ್ತಿನ ನಂತರ ತಮ್ಮ ಅಭ್ಯರ್ಥಿತನ ಸೂಚಿಸಿದವರಿಗೆ ದೂರವಾಣಿಯಲ್ಲಿ ಬೆದರಿಸಲಾಗುತ್ತಿದೆ ಎಂದು ಹೇಳಲಾದ ಧ್ವನಿಮುದ್ರಿತ ತುಣುಕನ್ನು ಅವರು ಬಹಿರಂಗ ಪಡಿಸಿದರು.</p>.<p>‘ತುಂಬಾ ಹೋರಾಟದ ನಂತರ ಆರ್.ಕೆ. ನಗರ ಕ್ಷೇತ್ರದ ಉಪಚುನಾವಣೆಗೆ ನನ್ನ ನಾಮಪತ್ರವನ್ನು ಕೊನೆಗೂ ಅಂಗೀಕರಿಸಲಾಗಿದೆ. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.</p>.<p><strong>ದೀಪಾ ನಾಮಪತ್ರ ತಿರಸ್ಕೃತ: </strong>ಆದರೆ, ಜಯಾ ಸಂಬಂಧಿ ದೀಪಾ ಜಯಕುಮಾರ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.</p>.<p>‘ಇದು ರಾಜಕೀಯ ದ್ವೇಷದ ನಿರ್ಧಾರ’ ಎಂದು ದೀಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ದೀಪಾ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣದಲ್ಲಿ ಹಲವು ವಿವರಗಳನ್ನು ನೀಡಿಲ್ಲ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಎಐಎಡಿಎಂಕೆಯ ಮುಖ್ಯಸ್ಥೆಯಾಗಿದ್ದ ಜೆ.ಜಯಲಲಿತಾ ಅವರ ಮೊದಲ ಪುಣ್ಯ ತಿಥಿ ಅಂಗವಾಗಿ ಪಕ್ಷದ ಸಾವಿರಾರು ಕಾರ್ಯಕರ್ತರು ಮಂಗಳವಾರ ಚೆನ್ನೈನಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಿದರು.</p>.<p>ಪಕ್ಷದ ಸಂಚಾಲಕ ಒ. ಪನ್ನೀರ್ ಸೆಲ್ವಂ ಮತ್ತು ಸಹ ಸಂಚಾಲಕ ಕೆ. ಪಳನಿಸ್ವಾಮಿ ಅವರು ಇದರ ನೇತೃತ್ವ ವಹಿಸಿದ್ದರು.</p>.<p>ಅಣ್ಣಾಸಾಲೈನಿಂದ ಹೊರಟ ಮೆರವಣಿಗೆ ಮರೀನಾ ಕಡಲ ಕಿನಾರೆಯಲ್ಲಿರುವ ಜಯಾಲಲಿತಾ ಅವರ ಸಮಾಧಿ ಬಳಿ ಕೊನೆಗೊಂಡಿತು.</p>.<p><strong>ಪುಷ್ಪನಮನ:</strong> ಕಪ್ಪು ಬಣ್ಣದ ದಿರಿಸು ಧರಿಸಿದ್ದ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಸೇರಿದಂತೆ ರಾಜ್ಯದ ಸಚಿವರು, ಪಕ್ಷದ ಸಂಸದರು ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಜಯಾಲಲಿತಾ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.</p>.<p>ಕೆಲವು ಕಾರ್ಯಕರ್ತರು ಜಯಾ ಪರ ಘೋಷಣೆಗಳನ್ನು ಕೂಗುತ್ತಿದ್ದರೆ, ಕೆಲವರು ಅಗಲಿದ ನಾಯಕಿಯನ್ನು ನೆನೆದು ಕಣ್ಣೀರುಗರೆದರು.</p>.<p>ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷದ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕಕ್ಕೂ ನಮನ ಸಲ್ಲಿಸಿದರು.</p>.<p><strong>ಪ್ರತಿಜ್ಞೆ ಸ್ವೀಕಾರ: </strong>‘ಅಮ್ಮ’ ಅವರ ಆಡಳಿತದ ‘ಸುವರ್ಣ ಯುಗ’ವನ್ನು ಮುಂದುವರೆಸುವ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಕಾರ್ಯಕರ್ತರು ಸ್ವೀಕರಿಸಿದರು. ಪನ್ನೀರ್ ಸೆಲ್ವಂ ಅವರು ಈ ಪ್ರತಿಜ್ಞೆಯನ್ನು ಓದಿದರೆ, ಉಳಿದವರು ಅದನ್ನು ಪುನರುಚ್ಚರಿಸಿದರು.</p>.<p><strong>ದಿನಕರನ್ ನಮನ:</strong> ಎಐಎಡಿಎಂಕೆಯ ಮತ್ತೊಂದು ಬಣದ ನಾಯಕ ಟಿ.ಟಿ.ವಿ ದಿನಕರನ್ ಕೂಡ ತಮ್ಮ ಬೆಂಬಲಿಗರೊಂದಿಗೆ ಜಯಾ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.</p>.<p>**</p>.<p><strong>ವಿಶಾಲ್ ನಾಮಪತ್ರ ಅಂಗೀಕೃತ</strong></p>.<p>ನಟ ವಿಶಾಲ್ ಅವರ ನಾಮಪತ್ರವನ್ನು ಒಮ್ಮೆ ತಿರಸ್ಕರಿಸಿದ್ದ ಚುನಾವಣಾ ಆಯೋಗ ಕೊನೆಗೆ ಅಂಗೀಕರಿಸಿದೆ.</p>.<p>ಆರಂಭದಲ್ಲಿ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ವಿಶಾಲ್ ಅವರು ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಬಂದು ಅವರನ್ನು ಬಲವಂತವಾಗಿ ಅಲ್ಲಿಂದ ಕಳುಹಿಸಬೇಕಾಯಿತು.</p>.<p>ಸ್ವಲ್ಪ ಹೊತ್ತಿನ ನಂತರ ತಮ್ಮ ಅಭ್ಯರ್ಥಿತನ ಸೂಚಿಸಿದವರಿಗೆ ದೂರವಾಣಿಯಲ್ಲಿ ಬೆದರಿಸಲಾಗುತ್ತಿದೆ ಎಂದು ಹೇಳಲಾದ ಧ್ವನಿಮುದ್ರಿತ ತುಣುಕನ್ನು ಅವರು ಬಹಿರಂಗ ಪಡಿಸಿದರು.</p>.<p>‘ತುಂಬಾ ಹೋರಾಟದ ನಂತರ ಆರ್.ಕೆ. ನಗರ ಕ್ಷೇತ್ರದ ಉಪಚುನಾವಣೆಗೆ ನನ್ನ ನಾಮಪತ್ರವನ್ನು ಕೊನೆಗೂ ಅಂಗೀಕರಿಸಲಾಗಿದೆ. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.</p>.<p><strong>ದೀಪಾ ನಾಮಪತ್ರ ತಿರಸ್ಕೃತ: </strong>ಆದರೆ, ಜಯಾ ಸಂಬಂಧಿ ದೀಪಾ ಜಯಕುಮಾರ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.</p>.<p>‘ಇದು ರಾಜಕೀಯ ದ್ವೇಷದ ನಿರ್ಧಾರ’ ಎಂದು ದೀಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ದೀಪಾ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣದಲ್ಲಿ ಹಲವು ವಿವರಗಳನ್ನು ನೀಡಿಲ್ಲ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>