ಗಣೇಶ್ ಸಂಬಂಧಿ ಜಗದೀಶ್ ಎಂಬುರವ ಜತೆ ಹುಲ್ಲು ಕೊಯ್ಯಲು ಹೊಲಕ್ಕೆ ಹೋಗಿದ್ದಾಗ ಆನೆ ಏಕಾಏಕಿ ದಾಳಿ ಮಾಡಿದೆ. ಗಣೇಶ್ ಅವರ ಹೊಟ್ಟೆಗೆ ಆನೆ ದಂತದಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ದಾಳಿಯಿಂದ ಅಶೋಕ್ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.