‘ಅಂದು ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿಯವರು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ 6,500 ಆಸನಗಳ ಸಭಾಭವನದ ಉದ್ಘಾಟನೆ ನೆರವೇರಿಸುವರು. ಕೊಂಗಳಿ ಬ್ಯಾರೇಜ್ ದಿಂದ ಚುಳಕಿನಾಲಾ ಜಲಾಶಯ ಮತ್ತು ತಾಲ್ಲೂಕಿನ 12 ಕೆರೆಗಳಿಗೆ ನೀರು ಭರ್ತಿ ಮಾಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು. ಇಲ್ಲಿನ ತೇರು ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ ಎಂದ ಅವರು, ಅಪೂರ್ಣ ಯೋಜನೆಗಳ ಪಟ್ಟಿಯೂ ಸಿದ್ಧಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.