<p><strong>ಹೂಡಿಕೆ ಮಾಡುವೆ</strong></p>.<p>68 ವರ್ಷ ಕಳೆದರೂ ದೇವರ ದಯೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಡಿಲ್ಲ. ಆರೋಗ್ಯ ಸಮಸ್ಯೆ ಕಾಡಬಹುದು ಎಂಬ ಚಿಂತೆಯಲ್ಲಿಯೇ 2017 ಓಡಿಹೋಯಿತು. 2018 ಹೀಗೆ ಹಾಳಾಗಬಾರದು. ಆಪತ್ಕಾಲಕ್ಕೆಂದು ಈ ವರ್ಷ ಒಂದಿಷ್ಟು ಹಣ ಹೂಡಿಕೆ ಮಾಡುತ್ತೇನೆ.</p>.<p><strong>-ಧರಣೇಂದ್ರ ಬರಮಪ್ಪ ಜವಳಿ,</strong></p>.<p><strong> ಮಧುರ ಚೇತನ ಕಾಲೊನಿ</strong><br /> <br /> ***</p>.<p><strong>ಅಂಕಣಕ್ಕೆ ಅವಕಾಶ ಕೋರುವೆ</strong></p>.<p>ನಾನು ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಸಲು ಯತ್ನಿಸುತ್ತಿರುವೆ.</p>.<p>ಕಳೆದ ವರ್ಷ ದಿನ ಪತ್ರಿಕೆಗಳಲ್ಲಿ ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯ ಹೋಗಿಸುವುದು ಹೇಗೆ ಎನ್ನುವ ಕುರಿತು ಲೇಖನ ಬರೆದೆ.</p>.<p>ಸ್ಪರ್ಧಾತ್ಮಕ ಗಣಿತವನ್ನು ಪ್ರೌಢ ಹಂತದಲ್ಲಿಯೇ ಮಕ್ಕಳ ಮನದಲ್ಲಿ ಬಿತ್ತಲು ಒಂದು ಮಾಸಪತ್ರಿಕೆಯಲ್ಲಿ ಗಣಿತ ಅಂಕಣಕಾರನಾಗಿ ಬರೆಯುತ್ತಿರುವೆ. ದಿನಪತ್ರಿಕೆ ಗಳಲ್ಲಿ ಗಣಿತದ ಕುರಿತು ಅಂಕಣ ಬರೆಯಲು ಅವಕಾಶ ಪಡೆದುಕೊಳ್ಳುವುದು ನನ್ನ ಈ ವರ್ಷದ ಸಂಕಲ್ಪ.<br /> </p>.<p><strong> -ಎಲ್.ಪಿ. ಕುಲಕರ್ಣಿ,<br /> ಚಾಲುಕ್ಯನಗರ</strong><br /> <br /> ***</p>.<p><strong>ವಿಮೆ ಅರಿವು ಮೂಡಿಸುವೆ</strong></p>.<p>2017ರಲ್ಲಿ ನಾನು ನಿವೃತ್ತನಾದೆ. ಚಟುವಟಿಕೆ ಇಲ್ಲದಿದ್ದರೆ ಆರೋಗ್ಯ ಹಾಳಾದೀತು ಎಂದು ಮನಸು ಎಚ್ಚರಿಸಿತು. ನನ್ನ ಪ್ರವೃತ್ತಿಯು ಸಮಾಜ ಮುಖಿಯಾಗಬೇಕು.</p>.<p>ಈ ವರ್ಷ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂಪರ್ಕಿಸಿ, ಕುಟುಂಬ ರಕ್ಷಣೆಯಲ್ಲಿ ಜೀವವಿಮೆಯ ಮಹತ್ವ ಮತ್ತು ಅಗತ್ಯದ ಅರಿವು ಮೂಡಿಸುವೆ. ಬರುವ ಅಲ್ಪ ಆದಾಯವನ್ನು ಅನಾಥಾಲಯಕ್ಕೆ ನೀಡುವ ಉದ್ದೇಶವಿದೆ.<br /> </p>.<p><strong>-ಶ್ಯಾಮರಾಜ್ ಆತಡಕರ್, ಜಯನಗರ 5ನೇ ಬ್ಲಾಕ್</strong><br /> <br /> ***</p>.<p><strong>‘... ಮದುಮಗಳು’ ಓದುವೆ</strong></p>.<p>ನಾನು ಮೂಲತಃ ಕನ್ನಡ ಸಾಹಿತ್ಯ ವಿದ್ಯಾರ್ಥಿನಿ. ಮದುವೆಯಾದ ಮೇಲೆ ಗಂಡ, ಮಗ ಅಂತ ಅವರ ಕಡೆಗೇ ಹೆಚ್ಚು ಗಮನಕೊಟ್ಟೆ. ಮನೆಕೆಲಸಗಳ ಮಧ್ಯೆ ನನ್ನ ನೆಚ್ಚಿನ ಸಾಹಿತ್ಯ ಕೃತಿಗಳನ್ನು ಓದುವುದನ್ನು ಮುಂದೂಡುತ್ತಲೇ ಬಂದೆ. ನೋಡುನೋಡುತ್ತಲೇ 2017 ಹೀಗೆ ಕಳೆದುಹೋಯಿತು. ಅದಕ್ಕೆ ಕನಿಷ್ಠ ಈ ವರ್ಷವಾದರೂ ನನ್ನ ನೆಚ್ಚಿನ ಲೇಖಕರಾದ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ನಿರಂಜನ ಅವರ ಕೃತಿಗಳನ್ನು ಓದಬೇಕೆಂದು ಯೋಜನೆ ಮಾಡಿಕೊಂಡಿದ್ದೇನೆ.</p>.<p>ನಗರದಲ್ಲೀಗ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕವೂ ಆರಂಭವಾಗಿರುವುದರಿಂದ ‘ಮದುಮಗಳು’ನಿಂದಲೇ ಸಾಹಿತ್ಯದ ಓದು ಆರಂಭಿಸುವೆ.<br /> </p>.<p><strong>_ ಅಂಬಿಕಾ ನವೀನ್, ಹೆಬ್ಬಾಳ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂಡಿಕೆ ಮಾಡುವೆ</strong></p>.<p>68 ವರ್ಷ ಕಳೆದರೂ ದೇವರ ದಯೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಡಿಲ್ಲ. ಆರೋಗ್ಯ ಸಮಸ್ಯೆ ಕಾಡಬಹುದು ಎಂಬ ಚಿಂತೆಯಲ್ಲಿಯೇ 2017 ಓಡಿಹೋಯಿತು. 2018 ಹೀಗೆ ಹಾಳಾಗಬಾರದು. ಆಪತ್ಕಾಲಕ್ಕೆಂದು ಈ ವರ್ಷ ಒಂದಿಷ್ಟು ಹಣ ಹೂಡಿಕೆ ಮಾಡುತ್ತೇನೆ.</p>.<p><strong>-ಧರಣೇಂದ್ರ ಬರಮಪ್ಪ ಜವಳಿ,</strong></p>.<p><strong> ಮಧುರ ಚೇತನ ಕಾಲೊನಿ</strong><br /> <br /> ***</p>.<p><strong>ಅಂಕಣಕ್ಕೆ ಅವಕಾಶ ಕೋರುವೆ</strong></p>.<p>ನಾನು ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಸಲು ಯತ್ನಿಸುತ್ತಿರುವೆ.</p>.<p>ಕಳೆದ ವರ್ಷ ದಿನ ಪತ್ರಿಕೆಗಳಲ್ಲಿ ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯ ಹೋಗಿಸುವುದು ಹೇಗೆ ಎನ್ನುವ ಕುರಿತು ಲೇಖನ ಬರೆದೆ.</p>.<p>ಸ್ಪರ್ಧಾತ್ಮಕ ಗಣಿತವನ್ನು ಪ್ರೌಢ ಹಂತದಲ್ಲಿಯೇ ಮಕ್ಕಳ ಮನದಲ್ಲಿ ಬಿತ್ತಲು ಒಂದು ಮಾಸಪತ್ರಿಕೆಯಲ್ಲಿ ಗಣಿತ ಅಂಕಣಕಾರನಾಗಿ ಬರೆಯುತ್ತಿರುವೆ. ದಿನಪತ್ರಿಕೆ ಗಳಲ್ಲಿ ಗಣಿತದ ಕುರಿತು ಅಂಕಣ ಬರೆಯಲು ಅವಕಾಶ ಪಡೆದುಕೊಳ್ಳುವುದು ನನ್ನ ಈ ವರ್ಷದ ಸಂಕಲ್ಪ.<br /> </p>.<p><strong> -ಎಲ್.ಪಿ. ಕುಲಕರ್ಣಿ,<br /> ಚಾಲುಕ್ಯನಗರ</strong><br /> <br /> ***</p>.<p><strong>ವಿಮೆ ಅರಿವು ಮೂಡಿಸುವೆ</strong></p>.<p>2017ರಲ್ಲಿ ನಾನು ನಿವೃತ್ತನಾದೆ. ಚಟುವಟಿಕೆ ಇಲ್ಲದಿದ್ದರೆ ಆರೋಗ್ಯ ಹಾಳಾದೀತು ಎಂದು ಮನಸು ಎಚ್ಚರಿಸಿತು. ನನ್ನ ಪ್ರವೃತ್ತಿಯು ಸಮಾಜ ಮುಖಿಯಾಗಬೇಕು.</p>.<p>ಈ ವರ್ಷ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂಪರ್ಕಿಸಿ, ಕುಟುಂಬ ರಕ್ಷಣೆಯಲ್ಲಿ ಜೀವವಿಮೆಯ ಮಹತ್ವ ಮತ್ತು ಅಗತ್ಯದ ಅರಿವು ಮೂಡಿಸುವೆ. ಬರುವ ಅಲ್ಪ ಆದಾಯವನ್ನು ಅನಾಥಾಲಯಕ್ಕೆ ನೀಡುವ ಉದ್ದೇಶವಿದೆ.<br /> </p>.<p><strong>-ಶ್ಯಾಮರಾಜ್ ಆತಡಕರ್, ಜಯನಗರ 5ನೇ ಬ್ಲಾಕ್</strong><br /> <br /> ***</p>.<p><strong>‘... ಮದುಮಗಳು’ ಓದುವೆ</strong></p>.<p>ನಾನು ಮೂಲತಃ ಕನ್ನಡ ಸಾಹಿತ್ಯ ವಿದ್ಯಾರ್ಥಿನಿ. ಮದುವೆಯಾದ ಮೇಲೆ ಗಂಡ, ಮಗ ಅಂತ ಅವರ ಕಡೆಗೇ ಹೆಚ್ಚು ಗಮನಕೊಟ್ಟೆ. ಮನೆಕೆಲಸಗಳ ಮಧ್ಯೆ ನನ್ನ ನೆಚ್ಚಿನ ಸಾಹಿತ್ಯ ಕೃತಿಗಳನ್ನು ಓದುವುದನ್ನು ಮುಂದೂಡುತ್ತಲೇ ಬಂದೆ. ನೋಡುನೋಡುತ್ತಲೇ 2017 ಹೀಗೆ ಕಳೆದುಹೋಯಿತು. ಅದಕ್ಕೆ ಕನಿಷ್ಠ ಈ ವರ್ಷವಾದರೂ ನನ್ನ ನೆಚ್ಚಿನ ಲೇಖಕರಾದ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ನಿರಂಜನ ಅವರ ಕೃತಿಗಳನ್ನು ಓದಬೇಕೆಂದು ಯೋಜನೆ ಮಾಡಿಕೊಂಡಿದ್ದೇನೆ.</p>.<p>ನಗರದಲ್ಲೀಗ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕವೂ ಆರಂಭವಾಗಿರುವುದರಿಂದ ‘ಮದುಮಗಳು’ನಿಂದಲೇ ಸಾಹಿತ್ಯದ ಓದು ಆರಂಭಿಸುವೆ.<br /> </p>.<p><strong>_ ಅಂಬಿಕಾ ನವೀನ್, ಹೆಬ್ಬಾಳ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>