ಸಂಸದ ಸುರೇಶ ಅಂಗಡಿ ಮಾತನಾಡಿ, ‘ ಈ ವಿಚಾರವಾಗಿ, ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಗೋವಾ ಹಾಗೂ ಕರ್ನಾಟಕದವರು ಬಡಿದಾಡಲಿ ಎನ್ನುವುದು ಆ ಪಕ್ಷದ ಬಯಕೆ. ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರೇ ಕರ್ನಾಟಕಕ್ಕೆ ನೀರು ಕೊಡಬೇಡಿ ಎಂದಿದ್ದರು. ಹೀಗಿರುವಾಗ ವಿವಾದ ಹೇಗೆ ಬಗೆಹರಿಯುತ್ತದೆ?’ ಎಂದು ಕೇಳಿದರು.