<p><strong>ನವದೆಹಲಿ</strong>: ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ– 2017’ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ.</p>.<p><strong>ರಾಜ್ಯಸಭೆಯಲ್ಲಿನ ಚರ್ಚೆಯ ಕ್ಷಣ ಕ್ಷಣದ ಸುದ್ದಿ</strong></p>.<p>ಮಧ್ಯಾಹ್ನ 1. 28: ಅಂತರ ಜಾತೀಯ ವಿವಾಹವಾದ ದಂಪತಿಗಳಿಗೆ ನೀಡುವ ಆರ್ಥಿಕ ನೆರವು ಮೊತ್ತ ರು.2.5 ಲಕ್ಷ ದಿಂದ ಏರಿಕೆ ಮಾಡುವ ಯಾವುದೇ ಉದ್ದೇಶ ಇಲ್ಲ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ವಿಜಯ್ ಸಂಪ್ಲಾ ಹೇಳಿದ್ದಾರೆ.</p>.<p>1.14: ಚುನಾವಣಾ ಸಂಹಿತೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸದಸ್ಯ ರಾಜೀವ್ ಶುಕ್ಲಾ, ವಿವಿಪಿಎಟಿ (ವೋಟರ್ ವೆ ರಿಫೈಡ್ ಪೇಪರ್ ಆಡಿಟ್ ಟ್ರಯಲ್) ಮತ್ತು ಇವಿಎಂಗಳಲ್ಲಿನ ಮತ ಪತ್ರ ಎಣಿಕೆಗೆ ನಿರ್ದಿಷ್ಟ ಸಲಹಾಸೂತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.</p>.<p>1.11: ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬಾರದು. ಆರೋಗ್ಯವಂತರು ಭಿಕ್ಷಾಟನೆ ಮಾಡುತ್ತಿದ್ದರೆ, ಅವರು ಅದನ್ನು ತೊರೆದು ಕೆಲಸ ಮಾಡಿ ಬದುಕಲು ಉತ್ತೇಜಿಸಬೇಕು, ಅಂಗವಿಕಲರಿಗೆ ಸರ್ಕಾರ ನೆರವು ನೀಡಬೇಕು ಎಂದು ಬಿಜೆಪಿ ಸದಸ್ಯ ಶವೈತ್ ಮಲಿಕ್ ಹೇಳಿದ್ದಾರೆ.</p>.<p>1.00: 2 ಗಂಟೆಯವರೆಗೆ ಕಲಾಪ ಮುಂದೂಡಿಕೆ</p>.<p>1.01: ಏಪ್ರಿಲ್ 1, 2014ಕ್ಕಿಂತ ಮುಂಚೆ ನೀಡಿದ ಸಾಲಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಜಾಸ್ತಿ ಇದೆ- ಜೇಟ್ಲಿ</p>.<p>12.50: 2010- 2013ರಲ್ಲಿ 471 ಉಗ್ರರನ್ನು ಹತ್ಯೆ ಮಾಡಲಾಗಿದ್ದು 2014ರಲ್ಲಿ 580 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ದಾಳಿ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹನ್ಸ್ರಾಜ್ ಅಖಿರ್ ಹೇಳಿದ್ದಾರೆ.</p>.<p>ಮಧ್ಯಾಹ್ನ 12.40: ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ), ಬ್ಯಾಂಕ್ ಸಾಲ, ಸಾಲ ಮನ್ನಾ, ಪನಾಮಾ ಪೇಪರ್ಸ್ , ಪ್ಯಾರಡೈಸ್ ಪೇಪರ್ಸ್ ಪ್ರಕರಣ ಸೇರಿದಂತೆ ವಿವಿಧ ವಿತ್ತೀಯ ಸಮಸ್ಯೆಗಳ ಬಗೆಗಿನ ಪ್ರಶ್ನೆಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.</p>.<p>12.27: ನಿಧನರಾದ ವ್ಯಕ್ತಿಗಳಿಗೆ ಸಂತಾಪ ಸೂಚಿಸುವಾಗ ಸದಸ್ಯರು ಪರಸ್ಪರ ಮಾತನಾಡುತ್ತಿರುವುದು ಕಂಡು ಬಂತು.ರಾಜ್ಯಸಭಾ ಸದಸ್ಯರ ಈ ನಡೆ ಸರಿಯಲ್ಲ ಎಂದು ಹೇಳಿದ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು</p>.<p>12.22: ಮಸೂದೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸ್ಥಾಯಿ ಸಮಿತಿಗೆ ಕಳುಹಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ರಾಜ್ಯಸಭೆಯಲ್ಲಿ ಈ ವಿಷಯ ಬಂದಾಗ, ಮಸೂದೆಗಳನ್ನು ಆಯ್ದ ಸಮಿತಿಗಳಿಗೆ ಕಳುಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ: ಡಿ. ರಾಜಾ</p>.<p>12.20: ಈ ವಿಧೇಯಕವನ್ನು ಆಯ್ದ ಸಮಿತಿಯ ಪರಾಮರ್ಶೆಗೆ ಕಳುಹಿಸಬೇಕೆಂದು ಎಡಪಕ್ಷಗಳು ಒತ್ತಾಯಿಸಲಿವೆ. ಆದರೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸಮಿತಿ ವ್ಯವಸ್ಥೆಯನ್ನು ಕಡೆಗಣಿಸುತ್ತಿದೆ: ಸಿಪಿಐ ನೇತಾರ ಡಿ. ರಾಜಾ</p>.<p>12.14: ಭಾರತೀಯ ವೈದ್ಯಕೀಯ ಮಂಡಳಿಯ(ಎಂಸಿಐ) ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಮಸೂದೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ</p>.<p>12.13: ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯಾದರೆ ವೈದ್ಯರಿಗೆ ಹೆಚ್ಚಿನ ಸೌಲಭ್ಯಗಳು ಒದಗಲಿವೆ: ನಡ್ಡಾ</p>.<p>12.12: ವೈದ್ಯರ ಮುಷ್ಕರ ನಿಲ್ಲಿಸಲು ಸರ್ಕಾರ ಮುಂದಾಗಬೇಕು: ವಿಪಕ್ಷ ನೇತಾರ ಗುಲಾಂ ನಬಿ ಆಜಾದ್</p>.<p>12.10: ವೈದ್ಯರ ಮುಷ್ಕರದಿಂದಾಗಿ ಹಲವಾರು ರೋಗಿಗಗಳು ಸಾವಿಗೀಡಾಗಿದ್ದಾರೆ: ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗ್ರವಾಲ್</p>.<p>12.01: ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟರೆ 10 ಹೆಜ್ಜೆ ಹಿಂದಿಡುತ್ತದೆ. ತ್ರಿವಳಿ ತಲಾಖ್ ಬಗ್ಗೆ ಕಾಂಗ್ರೆಸ್ ಗಲಿಬಿಲಿಗೊಂಡಿದೆ. ಮುಸ್ಲಿಂ ಮಹಿಳೆಯರು ಖುಷಿಯಾಗಿದ್ದಾರೆ, ಆದರೆ ಕಾಂಗ್ರೆಸ್ ಯಾಕೆ ಬೇಸರಗೊಂಡಿದೆ ಎಂದು ತಿಳಿಯುತ್ತಿಲ್ಲ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ.<br /> 11.30: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಹೆಚ್ಚುತ್ತಿದ್ದು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು: ಕಾಂಗ್ರೆಸ್ ಸದಸ್ಯೆ ಕುಮಾರಿ ಸೆಲ್ಜಾ<br /> 10.42: ತ್ರಿವಳಿ ತಲಾಖ್ ಮಸೂದೆಯನ್ನು ಆಯ್ದ ಸಮಿತಿಯ ಪರಾಮರ್ಶೆಗೊಳಪಡಿಸಬೇಕು- ಡಿಎಂಕೆ ಸಂಸದೆ ಕನ್ನಿಮೊಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ– 2017’ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ.</p>.<p><strong>ರಾಜ್ಯಸಭೆಯಲ್ಲಿನ ಚರ್ಚೆಯ ಕ್ಷಣ ಕ್ಷಣದ ಸುದ್ದಿ</strong></p>.<p>ಮಧ್ಯಾಹ್ನ 1. 28: ಅಂತರ ಜಾತೀಯ ವಿವಾಹವಾದ ದಂಪತಿಗಳಿಗೆ ನೀಡುವ ಆರ್ಥಿಕ ನೆರವು ಮೊತ್ತ ರು.2.5 ಲಕ್ಷ ದಿಂದ ಏರಿಕೆ ಮಾಡುವ ಯಾವುದೇ ಉದ್ದೇಶ ಇಲ್ಲ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ವಿಜಯ್ ಸಂಪ್ಲಾ ಹೇಳಿದ್ದಾರೆ.</p>.<p>1.14: ಚುನಾವಣಾ ಸಂಹಿತೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸದಸ್ಯ ರಾಜೀವ್ ಶುಕ್ಲಾ, ವಿವಿಪಿಎಟಿ (ವೋಟರ್ ವೆ ರಿಫೈಡ್ ಪೇಪರ್ ಆಡಿಟ್ ಟ್ರಯಲ್) ಮತ್ತು ಇವಿಎಂಗಳಲ್ಲಿನ ಮತ ಪತ್ರ ಎಣಿಕೆಗೆ ನಿರ್ದಿಷ್ಟ ಸಲಹಾಸೂತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.</p>.<p>1.11: ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬಾರದು. ಆರೋಗ್ಯವಂತರು ಭಿಕ್ಷಾಟನೆ ಮಾಡುತ್ತಿದ್ದರೆ, ಅವರು ಅದನ್ನು ತೊರೆದು ಕೆಲಸ ಮಾಡಿ ಬದುಕಲು ಉತ್ತೇಜಿಸಬೇಕು, ಅಂಗವಿಕಲರಿಗೆ ಸರ್ಕಾರ ನೆರವು ನೀಡಬೇಕು ಎಂದು ಬಿಜೆಪಿ ಸದಸ್ಯ ಶವೈತ್ ಮಲಿಕ್ ಹೇಳಿದ್ದಾರೆ.</p>.<p>1.00: 2 ಗಂಟೆಯವರೆಗೆ ಕಲಾಪ ಮುಂದೂಡಿಕೆ</p>.<p>1.01: ಏಪ್ರಿಲ್ 1, 2014ಕ್ಕಿಂತ ಮುಂಚೆ ನೀಡಿದ ಸಾಲಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಜಾಸ್ತಿ ಇದೆ- ಜೇಟ್ಲಿ</p>.<p>12.50: 2010- 2013ರಲ್ಲಿ 471 ಉಗ್ರರನ್ನು ಹತ್ಯೆ ಮಾಡಲಾಗಿದ್ದು 2014ರಲ್ಲಿ 580 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ದಾಳಿ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹನ್ಸ್ರಾಜ್ ಅಖಿರ್ ಹೇಳಿದ್ದಾರೆ.</p>.<p>ಮಧ್ಯಾಹ್ನ 12.40: ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ), ಬ್ಯಾಂಕ್ ಸಾಲ, ಸಾಲ ಮನ್ನಾ, ಪನಾಮಾ ಪೇಪರ್ಸ್ , ಪ್ಯಾರಡೈಸ್ ಪೇಪರ್ಸ್ ಪ್ರಕರಣ ಸೇರಿದಂತೆ ವಿವಿಧ ವಿತ್ತೀಯ ಸಮಸ್ಯೆಗಳ ಬಗೆಗಿನ ಪ್ರಶ್ನೆಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.</p>.<p>12.27: ನಿಧನರಾದ ವ್ಯಕ್ತಿಗಳಿಗೆ ಸಂತಾಪ ಸೂಚಿಸುವಾಗ ಸದಸ್ಯರು ಪರಸ್ಪರ ಮಾತನಾಡುತ್ತಿರುವುದು ಕಂಡು ಬಂತು.ರಾಜ್ಯಸಭಾ ಸದಸ್ಯರ ಈ ನಡೆ ಸರಿಯಲ್ಲ ಎಂದು ಹೇಳಿದ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು</p>.<p>12.22: ಮಸೂದೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸ್ಥಾಯಿ ಸಮಿತಿಗೆ ಕಳುಹಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ರಾಜ್ಯಸಭೆಯಲ್ಲಿ ಈ ವಿಷಯ ಬಂದಾಗ, ಮಸೂದೆಗಳನ್ನು ಆಯ್ದ ಸಮಿತಿಗಳಿಗೆ ಕಳುಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ: ಡಿ. ರಾಜಾ</p>.<p>12.20: ಈ ವಿಧೇಯಕವನ್ನು ಆಯ್ದ ಸಮಿತಿಯ ಪರಾಮರ್ಶೆಗೆ ಕಳುಹಿಸಬೇಕೆಂದು ಎಡಪಕ್ಷಗಳು ಒತ್ತಾಯಿಸಲಿವೆ. ಆದರೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸಮಿತಿ ವ್ಯವಸ್ಥೆಯನ್ನು ಕಡೆಗಣಿಸುತ್ತಿದೆ: ಸಿಪಿಐ ನೇತಾರ ಡಿ. ರಾಜಾ</p>.<p>12.14: ಭಾರತೀಯ ವೈದ್ಯಕೀಯ ಮಂಡಳಿಯ(ಎಂಸಿಐ) ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸುವ ಮಸೂದೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ</p>.<p>12.13: ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯಾದರೆ ವೈದ್ಯರಿಗೆ ಹೆಚ್ಚಿನ ಸೌಲಭ್ಯಗಳು ಒದಗಲಿವೆ: ನಡ್ಡಾ</p>.<p>12.12: ವೈದ್ಯರ ಮುಷ್ಕರ ನಿಲ್ಲಿಸಲು ಸರ್ಕಾರ ಮುಂದಾಗಬೇಕು: ವಿಪಕ್ಷ ನೇತಾರ ಗುಲಾಂ ನಬಿ ಆಜಾದ್</p>.<p>12.10: ವೈದ್ಯರ ಮುಷ್ಕರದಿಂದಾಗಿ ಹಲವಾರು ರೋಗಿಗಗಳು ಸಾವಿಗೀಡಾಗಿದ್ದಾರೆ: ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗ್ರವಾಲ್</p>.<p>12.01: ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟರೆ 10 ಹೆಜ್ಜೆ ಹಿಂದಿಡುತ್ತದೆ. ತ್ರಿವಳಿ ತಲಾಖ್ ಬಗ್ಗೆ ಕಾಂಗ್ರೆಸ್ ಗಲಿಬಿಲಿಗೊಂಡಿದೆ. ಮುಸ್ಲಿಂ ಮಹಿಳೆಯರು ಖುಷಿಯಾಗಿದ್ದಾರೆ, ಆದರೆ ಕಾಂಗ್ರೆಸ್ ಯಾಕೆ ಬೇಸರಗೊಂಡಿದೆ ಎಂದು ತಿಳಿಯುತ್ತಿಲ್ಲ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ.<br /> 11.30: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಹೆಚ್ಚುತ್ತಿದ್ದು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು: ಕಾಂಗ್ರೆಸ್ ಸದಸ್ಯೆ ಕುಮಾರಿ ಸೆಲ್ಜಾ<br /> 10.42: ತ್ರಿವಳಿ ತಲಾಖ್ ಮಸೂದೆಯನ್ನು ಆಯ್ದ ಸಮಿತಿಯ ಪರಾಮರ್ಶೆಗೊಳಪಡಿಸಬೇಕು- ಡಿಎಂಕೆ ಸಂಸದೆ ಕನ್ನಿಮೊಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>