ಪ್ರತಿ ವ್ಯಕ್ತಿಯ ಜೀವನದಲ್ಲೂ ನಡೆಯಬಹುದಾದ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ‘ಗಂಡಸು ಮದುವೆ ಆಗುವವರೆಗೆ ಒಂದು ರೀತಿ ಇರುತ್ತಾನೆ. ಮದುವೆಯ ನಂತರ ಅಪ್ಪ–ಅಮ್ಮನನ್ನು ಕಡೆಗಣಿಸುತ್ತಾನೆ. ಹೆಂಡತಿಯನ್ನು ಬಿಟ್ಟುಬಿಟ್ಟರೆ ಸಮಾಜ ಆಡಿಕೊಳ್ಳುತ್ತದೆ. ಅದೇ ರೀತಿ, ತಂದೆ–ತಾಯಿಯನ್ನು ಬಿಟ್ಟು ಹೆಂಡತಿಯ ಕಡೆ ಮುಖ ಮಾಡಿದರೂ ಹಾಗೇ ಆಗುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂಬ ತೊಳಲಾಟಕ್ಕೆ ಗಂಡಸು ಸಿಲುಕಿಕೊಳ್ಳುತ್ತಾನೆ. ಇದು ಈ ಸಿನಿಮಾದ ಕಥಾಹಂದರ’ ಎನ್ನುತ್ತಾರೆ ಗಣೇಶ್ ರಾವ್.