ಕುಮಾರವ್ಯಾಸ ಸಂಘದ ಉಪಾದ್ಯಕ್ಷ ಪ್ರೊ.ವಸಂತ ಸವದಿ ಅವರು ಕುಮಾರವ್ಯಾಸ ಭಾರತದ ಆಯ್ದ ಭಾಗಗಳನ್ನು ವಾಚಿಸಿದರು. ಸಂಘದ ಸಹಕಾರ್ಯದರ್ಶಿ ರಾಘವೇಂದ್ರ ಜೋಶಿ ಸ್ವಾಗತಿಸಿದರು. ಪ್ರಹ್ಲಾದಾಚಾರ್ಯ ನಿಲೂಗಲ್ಲ ನಿರೂಪಿಸಿದರು. ರವೀಂದ್ರ ಜೋಶಿ, ಆರ್.ಎಸ್.ಕುಲಕರ್ಣಿ, ಜಿ.ಎ.ದೇಶಪಾಂಡೆ, ರವಿ ಪೂಜಾರ ಇದ್ದರು. ಅನಂತಾಚಾರ್ಯ ಪೂಜಾರ, ಪೂಜಾ ಕಾರ್ಯಕ್ರಮ ನೆರವೇರಿಸಿದರು.