ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಮಿಲ್‌ಗೆ ಬೆಂಕಿ: ಅಪಾರ ನಷ್ಟ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಇಲ್ಲಿನ ಮೆಟಗುಡ್ಡ ಹತ್ತಿ ಮಿಲ್‌ನಲ್ಲಿ ಮಂಗಳವಾರ ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹತ್ತಿ ಸುಟ್ಟು ಕರಕಲಾಗಿದೆ. ಯಂತ್ರೋಪಕರಣಗಳಿಗೂ ಹಾನಿ ಉಂಟಾಗಿದೆ.

ತೀವ್ರವಾಗಿದ್ದ ಜ್ವಾಲೆಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟರು. ಈ ದೃಶ್ಯ ನೋಡಲೆಂದು ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಇವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಈ ಮಿಲ್‌, ಮುತ್ತುರಾಜ ಮೆಟಗುಡ್ಡ ಅವರಿಗೆ ಸೇರಿದ್ದು, ಗುತ್ತಿಗೆ ಆಧಾರ ಮೇಲೆ ಸೈಯ್ಯದ್‌ ಸುಭಾನಿ ಕುಸಲಾಪುರ ನಡೆಸುತ್ತಿದ್ದರು. ಹೆಚ್ಚಿನ ರೈತರು ಹತ್ತಿ ತಂದು ಮಿಲ್‌ನಲ್ಲಿ ಶೇಖರಿಸಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT