<p><strong>ಹೈದರಾಬಾದ್: </strong>ಇನ್ಫೊಸಿಸ್ ಆಡಳಿತ ಮಂಡಳಿ ಪುನರ್ರಚನೆ ಮಾಡುವಂತೆ ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ವಿ. ಬಾಲಕೃಷ್ಣನ್ ಅವರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.</p>.<p>ಕಾರ್ಪೊರೇಟ್ ನಿಯಮ ಪಾಲನೆಯಲ್ಲಿ ಲೋಪ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶಕರನ್ನು ಕೈಬಿಡುವಂತೆ ಡಿಸೆಂಬರ್ 9ರಂದು ಬಾಲಕೃಷ್ಣನ್ ಅವರು ಸಂಸ್ಥೆಯನ್ನು ಒತ್ತಾಯಿಸಿದ್ದರು. ಇದೀಗ ಸಲೀಲ್ ಪಾರೇಖ್ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮತ್ತೊಮ್ಮೆ ಆಡಳಿತ ಮಂಡಳಿ ಪುನರ್ರಚನೆಯ ಬೇಡಿಕೆ ಇಟ್ಟಿದ್ದಾರೆ.</p>.<p>‘ನಂದನ್ ನಿಲೇಕಣಿ ಅವರು ಆದಷ್ಟೂ ಬೇಗ ಆಡಳಿತ ಮಂಡಳಿಯ ಪುನರ್ರಚನೆ ಮಾಡಬೇಕಿದೆ. ಮುಖ್ಯವಾಗಿ ಮಾಜಿ ಸಹ ಅಧ್ಯಕ್ಷ ರವಿ ವೆಂಕಟೇಶನ್ ಮತ್ತು ಲೆಕ್ಕಪತ್ರ ಸಮಿತಿ ಅಧ್ಯಕ್ಷೆ ರೂಪಾ ಕುಡ್ವಾ ಅವರನ್ನು ಕೈಬಿಡಬೇಕು. ಆ ಮೂಲಕ ಹೊಸ ಸಿಇಒ ಪಾರೇಖ್ ಅವರಿಗೆ ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು’ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.</p>.<p>‘ಸಂಸ್ಥೆಯ ಮಾಜಿ ಸಿಎಫ್ಒ ರಾಜೀವ್ ಬನ್ಸಲ್ ಅವರಿಗೆ ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ ನೀಡಿದ ಗರಿಷ್ಠ ಪರಿಹಾರ ನೀಡಿಕೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ ಪ್ರಕರಣ ಇತ್ಯಥ್ಯಕ್ಕೆ ಸಂಸ್ಥೆಯು ಷೇರು ನಿಯಂತ್ರಣ ಮಂಡಳಿಯ (ಸೆಬಿ) ಮೊರೆ ಹೋಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಆಡಳಿತ ಮಂಡಳಿಗೆ ವಿಶಾಲದೃಷ್ಟಿಕೋನ ಇರುವವರನ್ನು ನೇಮಿಸುವ ಅಗತ್ಯವಿದೆ’ ಎಂದು ಸಲಹೆಯನ್ನೂ ನೀಡಿದ್ದಾರೆ.</p>.<p>‘ಉತ್ತಮ ಹಿನ್ನೆಲೆಯಿಂದ ಬಂದಿರುವ ಪಾರೇಖ್ ಅವರಿಗೆ ಸಂಸ್ಥೆಯಲ್ಲಿ ಹೊಸತನ ತರುವ ಸದಾವಕಾಶ ಒದಗಿಬಂದಿದೆ’ ಎಂದು ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ಇನ್ಫೊಸಿಸ್ ಆಡಳಿತ ಮಂಡಳಿ ಪುನರ್ರಚನೆ ಮಾಡುವಂತೆ ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ವಿ. ಬಾಲಕೃಷ್ಣನ್ ಅವರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.</p>.<p>ಕಾರ್ಪೊರೇಟ್ ನಿಯಮ ಪಾಲನೆಯಲ್ಲಿ ಲೋಪ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶಕರನ್ನು ಕೈಬಿಡುವಂತೆ ಡಿಸೆಂಬರ್ 9ರಂದು ಬಾಲಕೃಷ್ಣನ್ ಅವರು ಸಂಸ್ಥೆಯನ್ನು ಒತ್ತಾಯಿಸಿದ್ದರು. ಇದೀಗ ಸಲೀಲ್ ಪಾರೇಖ್ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮತ್ತೊಮ್ಮೆ ಆಡಳಿತ ಮಂಡಳಿ ಪುನರ್ರಚನೆಯ ಬೇಡಿಕೆ ಇಟ್ಟಿದ್ದಾರೆ.</p>.<p>‘ನಂದನ್ ನಿಲೇಕಣಿ ಅವರು ಆದಷ್ಟೂ ಬೇಗ ಆಡಳಿತ ಮಂಡಳಿಯ ಪುನರ್ರಚನೆ ಮಾಡಬೇಕಿದೆ. ಮುಖ್ಯವಾಗಿ ಮಾಜಿ ಸಹ ಅಧ್ಯಕ್ಷ ರವಿ ವೆಂಕಟೇಶನ್ ಮತ್ತು ಲೆಕ್ಕಪತ್ರ ಸಮಿತಿ ಅಧ್ಯಕ್ಷೆ ರೂಪಾ ಕುಡ್ವಾ ಅವರನ್ನು ಕೈಬಿಡಬೇಕು. ಆ ಮೂಲಕ ಹೊಸ ಸಿಇಒ ಪಾರೇಖ್ ಅವರಿಗೆ ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು’ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.</p>.<p>‘ಸಂಸ್ಥೆಯ ಮಾಜಿ ಸಿಎಫ್ಒ ರಾಜೀವ್ ಬನ್ಸಲ್ ಅವರಿಗೆ ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ ನೀಡಿದ ಗರಿಷ್ಠ ಪರಿಹಾರ ನೀಡಿಕೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ ಪ್ರಕರಣ ಇತ್ಯಥ್ಯಕ್ಕೆ ಸಂಸ್ಥೆಯು ಷೇರು ನಿಯಂತ್ರಣ ಮಂಡಳಿಯ (ಸೆಬಿ) ಮೊರೆ ಹೋಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಆಡಳಿತ ಮಂಡಳಿಗೆ ವಿಶಾಲದೃಷ್ಟಿಕೋನ ಇರುವವರನ್ನು ನೇಮಿಸುವ ಅಗತ್ಯವಿದೆ’ ಎಂದು ಸಲಹೆಯನ್ನೂ ನೀಡಿದ್ದಾರೆ.</p>.<p>‘ಉತ್ತಮ ಹಿನ್ನೆಲೆಯಿಂದ ಬಂದಿರುವ ಪಾರೇಖ್ ಅವರಿಗೆ ಸಂಸ್ಥೆಯಲ್ಲಿ ಹೊಸತನ ತರುವ ಸದಾವಕಾಶ ಒದಗಿಬಂದಿದೆ’ ಎಂದು ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>