ಇದಲ್ಲದೆ 34 ಕೋಟಿ ವೆಚ್ಚದಲ್ಲಿ 44 ಗ್ರಾಮಗಳ 92 ಕೆರೆಗಳಿಗೆ ಹೇಮಾವತಿ ನದಿಯಿಂದ ನೀರು ಹರಿಸುವ ಗಂಗನಾಳು ಏತನೀರಾವರಿ ಯೋಜನೆಯ ಮೊದಲ ಹಂತ, ಹೊನ್ನವಳ್ಳಿ ಸಮೀಪ ₹ 35ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ,₹ 4.2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ, ಸೆಸ್ಕ್ ಆಡಳಿತ ಕಚೇರಿ ಕಟ್ಟಡ, ರಾಮನಾಥಪುರ ತೆರಕಣಾಂಬಿ ರಸ್ತೆಯ ಸೇತುವೆ, ಹಾಸನ ಪಿರಿಯಾಪಟ್ಟಣ ರಸ್ತೆ, ಸಂತೆಮರೂರು, ವಿಜಾಪುರ ಅರಣ್ಯ ಗ್ರಾಮಗಳ ಪಶು ಚಿಕಿತ್ಸಾಲಯ, ಎಪಿಎಂಸಿ ಹರಾಜು ಮಾರುಕಟ್ಟೆಯ ನೂತನ ಕಟ್ಟಡ ಹಾಗೂ ರಸ್ತೆ, ಗೊರೂರಿನಲ್ಲಿ ಹೇಮಾವತಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಉದ್ಘಾಟನೆಯಾಗಲಿವೆ.