<p><strong>ಕೊಪ್ಪಳ</strong>: ಗವಿಮಠದ ಆವರಣದಲ್ಲಿ ಬುಧವಾರ ಉದ್ಘಾಟನೆಗೊಂಡ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.</p>.<p>ಈ ಬಾರಿ ಗವಿಮಠದ ಕೆರೆಯ ನಡುವಿನ ಮಂಟಪ ಹಾಗೂ ತೆಪ್ಪೋತ್ಸವ ಮಾದರಿ ರೂಪಿಸಿರುವುದು ವಿಶೇಷ. ಕೆರೆಯ ನಡುವೆ ಇಳಿಬಿಟ್ಟ ಆಲದ ಬಳ್ಳಿಗಳ ನಡುವೆ ನೀರು ಸುರಿಯುವ ನೋಟ, ಮಧ್ಯೆ ಇತ್ತೀಚೆಗೆ ನಡೆದ ತೆಪ್ಪೋತ್ಸವದ ತೆಪ್ಪದ ಮಾದರಿ ಗಮನ ಸೆಳೆಯುತ್ತಿದೆ.</p>.<p>ಕೆರೆ ನಡುವಿನ ಮಂಟಪ ರಚನೆಗೆ 50 ಸಾವಿರ ಗುಲಾಬಿ ಹೂಗಳನ್ನು ಬಳಸಲಾಗಿದೆ. ಗುಲಾಬಿ, ಡಾರ್ಕ್ ಪಿಂಕ್, ಕೆಂಪು, ಬಿಳಿ ಹಾಗೂ ಹಳದಿ ಗುಲಾಬಿಗಳನ್ನು ಬಳಸಲಾಗಿದೆ. 1 ಕ್ವಿಂಟಲ್ ಚೆಂಡು ಹೂ ಬಳಸಲಾಗಿದೆ. ಅಲ್ಲದೇ ಜರ್ಬೇರಾ, ಕಾರ್ಸಿನಿಸಿಯನ್, ಸಿಲಾಜಿ...ಹೀಗೆ 20 ವಿವಿಧ ಬಗೆಯ ಹೂಗಳನ್ನು ಬಳಸಲಾಗಿದೆ.</p>.<p>'ಪ್ರತಿದಿನ 20ರಿಂದ 30 ಸಾವಿರ ಹೂಗಳನ್ನು ಬದಲಿಸಲಾಗುತ್ತದೆ. ಹೂಗಳ ತಾಜಾತನವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ಹೂಗಳಿಗೆ ಮಾತ್ರ ₹ 2ರಿಂದ 3 ಲಕ್ಷ ವ್ಯಯಿಸಲಾಗಿದೆ. ಇಡೀ ಪ್ರದರ್ಶನಕ್ಕೆ ಸುಮಾರು ₹ 7 ಲಕ್ಷದಷ್ಟು ವೆಚ್ಚವಾಗಿದೆ. ಹಲವು ಪ್ರಾತ್ಯಕ್ಷತೆಗಳನ್ನೂ ಇಲ್ಲಿ ಇರಿಸಲಾಗಿದೆ' ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದರು.</p>.<p>ಅಣಬೆ ಉತ್ಪನ್ನಗಳ ಮಾರಾಟ: ಹುಲಿಗಿಯ ರೈತರು ಬೆಳೆದ ಅಣಬೆ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮತ್ತು ಅಣಬೆಯ ತಿನಿಸುಗಳ ರುಚಿಯನ್ನು ಜಾತ್ರೆಗೆ ಬಂದವರು ಸವಿಯಬಹುದು.</p>.<p>‘ಇಂಥ ಖಾದ್ಯಗಳನ್ನು ತಯಾರಿಸಲು ಸ್ಥಳೀಯರಿಗೆ ತರಬೇತಿ ನೀಡಲಾಗುತ್ತದೆ. ಅಣಬೆಯಲ್ಲಿ ಎಲ್ಲ ಪೋಷಕಾಂಶಗಳು ಇವೆ. ಜೇನು ಕೃಷಿಯ ಪ್ರಾತ್ಯಕ್ಷಿಕೆ ಮತ್ತು ಉತ್ಪನ್ನಗಳ ಮಾರಾಟ ಇದೆ’ ಎಂದು ಕೃಷ್ಣ ಮಾಹಿತಿ ನೀಡಿದರು.</p>.<p>ರೈತರು ಬೆಳೆದ ದ್ರಾಕ್ಷಿ, ದಾಳಿಂಬೆ, ಬಾಳೆ ಹಣ್ಣು, ಕಲ್ಲಂಗಡಿ ಹೀಗೆ ವಿವಿಧ ಹಣ್ಣು, ತರಕಾರಿಗಳಿಂದ ವಿವಿಧ ಕಲಾಕೃತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮುಖ ಭಾವ ಕೆತ್ತಲಾಗಿದೆ. ಇವು ಶಿವಮೊಗ್ಗದ ಕಲಾವಿದ ಹರೀಶ್ ಅವರ ಕೃತಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಗವಿಮಠದ ಆವರಣದಲ್ಲಿ ಬುಧವಾರ ಉದ್ಘಾಟನೆಗೊಂಡ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.</p>.<p>ಈ ಬಾರಿ ಗವಿಮಠದ ಕೆರೆಯ ನಡುವಿನ ಮಂಟಪ ಹಾಗೂ ತೆಪ್ಪೋತ್ಸವ ಮಾದರಿ ರೂಪಿಸಿರುವುದು ವಿಶೇಷ. ಕೆರೆಯ ನಡುವೆ ಇಳಿಬಿಟ್ಟ ಆಲದ ಬಳ್ಳಿಗಳ ನಡುವೆ ನೀರು ಸುರಿಯುವ ನೋಟ, ಮಧ್ಯೆ ಇತ್ತೀಚೆಗೆ ನಡೆದ ತೆಪ್ಪೋತ್ಸವದ ತೆಪ್ಪದ ಮಾದರಿ ಗಮನ ಸೆಳೆಯುತ್ತಿದೆ.</p>.<p>ಕೆರೆ ನಡುವಿನ ಮಂಟಪ ರಚನೆಗೆ 50 ಸಾವಿರ ಗುಲಾಬಿ ಹೂಗಳನ್ನು ಬಳಸಲಾಗಿದೆ. ಗುಲಾಬಿ, ಡಾರ್ಕ್ ಪಿಂಕ್, ಕೆಂಪು, ಬಿಳಿ ಹಾಗೂ ಹಳದಿ ಗುಲಾಬಿಗಳನ್ನು ಬಳಸಲಾಗಿದೆ. 1 ಕ್ವಿಂಟಲ್ ಚೆಂಡು ಹೂ ಬಳಸಲಾಗಿದೆ. ಅಲ್ಲದೇ ಜರ್ಬೇರಾ, ಕಾರ್ಸಿನಿಸಿಯನ್, ಸಿಲಾಜಿ...ಹೀಗೆ 20 ವಿವಿಧ ಬಗೆಯ ಹೂಗಳನ್ನು ಬಳಸಲಾಗಿದೆ.</p>.<p>'ಪ್ರತಿದಿನ 20ರಿಂದ 30 ಸಾವಿರ ಹೂಗಳನ್ನು ಬದಲಿಸಲಾಗುತ್ತದೆ. ಹೂಗಳ ತಾಜಾತನವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ಹೂಗಳಿಗೆ ಮಾತ್ರ ₹ 2ರಿಂದ 3 ಲಕ್ಷ ವ್ಯಯಿಸಲಾಗಿದೆ. ಇಡೀ ಪ್ರದರ್ಶನಕ್ಕೆ ಸುಮಾರು ₹ 7 ಲಕ್ಷದಷ್ಟು ವೆಚ್ಚವಾಗಿದೆ. ಹಲವು ಪ್ರಾತ್ಯಕ್ಷತೆಗಳನ್ನೂ ಇಲ್ಲಿ ಇರಿಸಲಾಗಿದೆ' ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದರು.</p>.<p>ಅಣಬೆ ಉತ್ಪನ್ನಗಳ ಮಾರಾಟ: ಹುಲಿಗಿಯ ರೈತರು ಬೆಳೆದ ಅಣಬೆ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮತ್ತು ಅಣಬೆಯ ತಿನಿಸುಗಳ ರುಚಿಯನ್ನು ಜಾತ್ರೆಗೆ ಬಂದವರು ಸವಿಯಬಹುದು.</p>.<p>‘ಇಂಥ ಖಾದ್ಯಗಳನ್ನು ತಯಾರಿಸಲು ಸ್ಥಳೀಯರಿಗೆ ತರಬೇತಿ ನೀಡಲಾಗುತ್ತದೆ. ಅಣಬೆಯಲ್ಲಿ ಎಲ್ಲ ಪೋಷಕಾಂಶಗಳು ಇವೆ. ಜೇನು ಕೃಷಿಯ ಪ್ರಾತ್ಯಕ್ಷಿಕೆ ಮತ್ತು ಉತ್ಪನ್ನಗಳ ಮಾರಾಟ ಇದೆ’ ಎಂದು ಕೃಷ್ಣ ಮಾಹಿತಿ ನೀಡಿದರು.</p>.<p>ರೈತರು ಬೆಳೆದ ದ್ರಾಕ್ಷಿ, ದಾಳಿಂಬೆ, ಬಾಳೆ ಹಣ್ಣು, ಕಲ್ಲಂಗಡಿ ಹೀಗೆ ವಿವಿಧ ಹಣ್ಣು, ತರಕಾರಿಗಳಿಂದ ವಿವಿಧ ಕಲಾಕೃತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮುಖ ಭಾವ ಕೆತ್ತಲಾಗಿದೆ. ಇವು ಶಿವಮೊಗ್ಗದ ಕಲಾವಿದ ಹರೀಶ್ ಅವರ ಕೃತಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>