<p><strong>ನವದೆಹಲಿ: </strong>ಪಾಲಕರಿಂದ ಬೇರ್ಪಟ್ಟಿರುವ, ಒಂದೇ ಕುಟುಂಬದ ಐದು ವರ್ಷ ಮೇಲ್ಪಟ್ಟ ಮಕ್ಕಳನ್ನು ಪ್ರತ್ಯೇಕವಾಗಿ ದತ್ತು ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.</p>.<p>ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್ಎ) ಒಡಹುಟ್ಟಿದ ಮಕ್ಕಳನ್ನು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ, ಒಂದೇ ಕುಟುಂಬಕ್ಕೆ ಇದುವರೆಗೆ ದತ್ತು ನೀಡುತ್ತಿದೆ. ಈ ನಿಯಮವನ್ನು ಬದಲಿಸಲಾಗುವುದು. ಆದರೆ, ಪ್ರತ್ಯೇಕಗೊಳ್ಳಲು ಮಕ್ಕಳ ಒಪ್ಪಿಗೆ ಅಗತ್ಯ ಎಂದು ಅವರು ತಿಳಿಸಿದರು.</p>.<p>ಈ ಬಗ್ಗೆ ದತ್ತು ಪ್ರಾಧಿಕಾರವು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸೇರಿದಂತೆ ಇತರೆ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ಹೇಳಿದರು.</p>.<p>‘ಮಗುವೊಂದನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ, ಒಡಹುಟ್ಟಿದ ಮಕ್ಕಳು ಎಂಬ ಕಾರಣಕ್ಕೆ ಇದುವರೆಗೆ ಮಗುವನ್ನು ಹೊಂದಲು ಸಾಧ್ಯವಾಗಿಲ್ಲ’ ಎಂದು ಮಹಿಳೆಯೊಬ್ಬರು ತಮ್ಮ ಬಳಿ ಅಳಲು ತೋಡಿಕೊಂಡಿದ್ದರು ಎಂದು ಮಾಹಿತಿ ನೀಡಿದರು.</p>.<p>ಐದು ವರ್ಷದ ಮಕ್ಕಳು ಇಂತಹ ನಿರ್ಧಾರ ಕೈಗೊಳ್ಳುವಷ್ಟು ಶಕ್ತರೇ ಎಂಬ ಸುದ್ದಿಗಾರರ ಪ್ರಶ್ನೆಗೆ ‘ನಾನೇನು ಮಾಡಬೇಕು ನೀವು ಹೇಳಿ? ಒಡಹುಟ್ಟಿದವರು ಎಂಬ ಕಾರಣಕ್ಕೆ ಅನಾಥಾಶ್ರಮಗಳಲ್ಲಿಯೇ ಅವರನ್ನು ಇರಿಸಬೇಕಾ? ’ ಎಂದು ಪ್ರಶ್ನಿಸಿದರು.</p>.<p>ಇಷ್ಟಪಟ್ಟು ಬೇರ್ಪಡುವುದಾದರೆ ಬೇರ್ಪಡಲಿ ಇಲ್ಲದಿದ್ದರೆ ಬೇಡ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಪಾಲಕರಿಂದ ಬೇರ್ಪಟ್ಟಿರುವ, ಒಂದೇ ಕುಟುಂಬದ ಐದು ವರ್ಷ ಮೇಲ್ಪಟ್ಟ ಮಕ್ಕಳನ್ನು ಪ್ರತ್ಯೇಕವಾಗಿ ದತ್ತು ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.</p>.<p>ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್ಎ) ಒಡಹುಟ್ಟಿದ ಮಕ್ಕಳನ್ನು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ, ಒಂದೇ ಕುಟುಂಬಕ್ಕೆ ಇದುವರೆಗೆ ದತ್ತು ನೀಡುತ್ತಿದೆ. ಈ ನಿಯಮವನ್ನು ಬದಲಿಸಲಾಗುವುದು. ಆದರೆ, ಪ್ರತ್ಯೇಕಗೊಳ್ಳಲು ಮಕ್ಕಳ ಒಪ್ಪಿಗೆ ಅಗತ್ಯ ಎಂದು ಅವರು ತಿಳಿಸಿದರು.</p>.<p>ಈ ಬಗ್ಗೆ ದತ್ತು ಪ್ರಾಧಿಕಾರವು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸೇರಿದಂತೆ ಇತರೆ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ಹೇಳಿದರು.</p>.<p>‘ಮಗುವೊಂದನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ, ಒಡಹುಟ್ಟಿದ ಮಕ್ಕಳು ಎಂಬ ಕಾರಣಕ್ಕೆ ಇದುವರೆಗೆ ಮಗುವನ್ನು ಹೊಂದಲು ಸಾಧ್ಯವಾಗಿಲ್ಲ’ ಎಂದು ಮಹಿಳೆಯೊಬ್ಬರು ತಮ್ಮ ಬಳಿ ಅಳಲು ತೋಡಿಕೊಂಡಿದ್ದರು ಎಂದು ಮಾಹಿತಿ ನೀಡಿದರು.</p>.<p>ಐದು ವರ್ಷದ ಮಕ್ಕಳು ಇಂತಹ ನಿರ್ಧಾರ ಕೈಗೊಳ್ಳುವಷ್ಟು ಶಕ್ತರೇ ಎಂಬ ಸುದ್ದಿಗಾರರ ಪ್ರಶ್ನೆಗೆ ‘ನಾನೇನು ಮಾಡಬೇಕು ನೀವು ಹೇಳಿ? ಒಡಹುಟ್ಟಿದವರು ಎಂಬ ಕಾರಣಕ್ಕೆ ಅನಾಥಾಶ್ರಮಗಳಲ್ಲಿಯೇ ಅವರನ್ನು ಇರಿಸಬೇಕಾ? ’ ಎಂದು ಪ್ರಶ್ನಿಸಿದರು.</p>.<p>ಇಷ್ಟಪಟ್ಟು ಬೇರ್ಪಡುವುದಾದರೆ ಬೇರ್ಪಡಲಿ ಇಲ್ಲದಿದ್ದರೆ ಬೇಡ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>