ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಓಂಕಾರ ವಲಯದ ಅಂಚಿನ ಕುರುಬರ ಹುಂಡಿ ಗ್ರಾಮದಲ್ಲಿ ಶುಕ್ರವಾರ ಮರಿಯಾನೆ ಸೇರಿದಂತೆ ಆನೆಗಳ ಗುಂಪು ಕಾಣಿಸಿಕೊಂಡಿದೆ.
ಮಂಚಹಳ್ಳಿ ಬೆಟ್ಟದ ಕೆಳ ಭಾಗದಲ್ಲಿ 5 ಆನೆಗಳ ಗುಂಪು ಸಂಚರಿಸುತ್ತಿದೆ. ಈ ಭಾಗದಲ್ಲಿ ಪದೇ ಪದೇ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಮತ್ತು ಕುರಿಗಾಹಿಗಳು ಕೆಲಸಕ್ಕೆ ಹೋಗಲು ಹೆದರುತ್ತಿದ್ದಾರೆ.
‘ಈ ಭಾಗದಲ್ಲಿ ಇತ್ತೀಚೆಗೆ ಆನೆ ಮರಿಯೊಂದು ತಪ್ಪಿಸಿಕೊಂಡು ಮೃತಪಟ್ಟಿತ್ತು. ಇದ್ದರಿಂದ ಆನೆಗಳ ಗುಂಪು ಈ ಭಾಗದಲ್ಲೇ ಓಡಾಡುತ್ತಿದೆ. ಅವುಗಳನ್ನು ದೂರ ಓಡಿಸಲು, ಬರುವ ಮಾರ್ಗವನ್ನು ಬಂದ್ ಮಾಡಲಾಗಿದೆ’ ಎಂದು ಓಂಕಾರ ವಲಯದ ಅರಣ್ಯಾಧಿಕಾರಿ ನವೀನ್ಕುಮಾರ್ ತಿಳಿಸಿದರು.