ಓಲೈಕೆಯೇ ಕಾರಣ: ಹಿಂದೂಗಳ ರಕ್ಷಣೆ ಮಾಡುತ್ತೇವೆಂದು ಬಿಜೆಪಿ, ಮುಸ್ಲಿಮರ ರಕ್ಷಣೆ ಮಾಡುವುದಾಗಿ ಕಾಂಗ್ರೆಸ್ಸಿಗರು ಅವರನ್ನು ಓಲೈಸಲು ಹೊರಟಿರುವುದೇ ಮಂಗಳೂರಿನ ಇಂದಿನ ಸ್ಥಿತಿಗೆ ಕಾರಣವಾಗಿದೆ. ಅಲ್ಲಷ್ಟೇ ಮುಸ್ಲಿಮರಿಲ್ಲ. ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿಯಲ್ಲೂ ಇದ್ದಾರೆ. ಆದರೆ, ಇಲ್ಲೆಲ್ಲ ಏಕೆ ಘರ್ಷಣೆಗಳಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ‘ಒಬ್ಬರು ಸೀಮೆ ಎಣ್ಣೆ ಸುರಿಯುತ್ತಾರೆ, ಇನ್ನೊಬ್ಬರು ಬೆಂಕಿ ಹಚ್ಚುತ್ತಾರೆ’ ಎಂದು ಕಿಡಿಕಾರಿದರು.