ಇದಕ್ಕಾಗಿ 2.05 ಟಿಎಂಸಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ತುಂಗಭದ್ರಾ ಜಲಾಶಯದಿಂದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ, ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿರುವ ಮತ್ತು ಇದೇ ಜಲಾಶಯವನ್ನು ನೀರಿನ ಮೂಲವನ್ನಾಗಿಸಿಕೊಂಡಿರುವ ಅನೇಕ ಪಟ್ಟಣ, ಗ್ರಾಮಗಳಿವೆ. ಈಗಾಗಲೇ ಸತತ ಬರಗಾಲದಿಂದ ಈ ಭಾಗಕ್ಕೂ ಅನೇಕ ಬಾರಿ ಕುಡಿಯುವ ನೀರಿನ ತತ್ವಾರ ಉಂಟಾಗಿತ್ತು’ ಎಂದು ತಿಳಿಸಿದ್ದಾರೆ.