<p><strong>ಬೆಂಗಳೂರು:</strong> ‘ಇಂದಿನ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಯೇ ಛಿದ್ರವಾಗುತ್ತಿದೆ. ಮುಂದಿನ ಪೀಳಿಗೆಯ ಪರಿಸ್ಥಿತಿ ಏನಾಗಬಹುದೆಂಬ ಆತಂಕ ಎಲ್ಲರನ್ನೂ ಕಾಡಲಾರಂಭಿಸಿದೆ’ ಎಂದು ನಟ ರಮೇಶ್ ಭಟ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಶನಿವಾರ ಸಪ್ನಾ ಬುಕ್ ಹೌಸ್ ಮತ್ತು ರೊದ್ದಂ ಕುಟುಂಬ ಆಯೋಜಿಸಿದ್ದ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮುಖ್ಯ ವ್ಯವಸ್ಥಾಪಕ ಶ್ರಿನಿವಾಸ ರೊದ್ದಂ ಅವರು ರಚಿಸಿರುವ ‘ಓಹ್ ಅವರ್ ಬ್ಯಾಂಕ್’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಇಂದು ಬಹುತೇಕ ಮನೆಗಳಲ್ಲಿ ಹಿರಿಯರಿಲ್ಲ. ಮಕ್ಕಳಿಗೆ ಕಥೆ ಹೇಳುವವರೂ ಇಲ್ಲ. ಪತಿ– ಪತ್ನಿ ಇಬ್ಬರೂ ದುಡಿಯುವ ಒತ್ತಡಕ್ಕೆ ಬಿದ್ದು ದಿನದ ಬಹುಪಾಲನ್ನು ಸಂಚಾರ ದಟ್ಟಣೆಯಲ್ಲಿ, ಕಚೇರಿಗಳಲ್ಲಿ ಕಳೆಯುತ್ತಿದ್ದಾರೆ’ ಎಂದರು.</p>.<p>‘ಈಗಿನ ಪೀಳಿಗೆಯವರ ಜೀವನಶೈಲಿ ನೋಡಿದರೆ ನಾವೇ ಭಾಗ್ಯಶಾಲಿಗಳು ಎನಿಸುತ್ತದೆ. ಮುಂದಿನ ಪೀಳಿಗೆಯವರ ಬದುಕಿನ ಸ್ಥಿತಿ ಬಗ್ಗೆ ಯೋಚಿಸಿದರೆ ಆತಂಕ ಉಂಟಾಗುತ್ತದೆ’ ಎಂದರು.</p>.<p>ರೊದ್ದಂ ಅವರ ಕಾದಂಬರಿಗಳಿಗೆ ಓದಿಸಿಕೊಳ್ಳುವ ಗುಣವಿದೆ ಎಂದು ಕಾರ್ಪೋರೇಷನ್ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಲ್.ಗೋಪಾಲಕೃಷ್ಣ ಹೇಳಿದರು.</p>.<p><strong>ಪುಸ್ತಕ ಶೀರ್ಷಿಕೆ: ಓಹ್ ಅವರ್ ಬ್ಯಾಂಕ್ (ಕಾದಂಬರಿ)</strong><br /> ಲೇಖಕರು: ಶಿವರಾಂ ರೊದ್ದಂ<br /> ಪ್ರಕಾಶಕರು: ಸಪ್ನ ಬುಕ್ ಹೌಸ್<br /> ಬೆಲೆ: ₹350; ಪುಟ:328<br /> ಸಂಪರ್ಕ: ಛಾಯಾ ಸಾಹಿತ್ಯ, #993, 1ನೇ ಮುಖ್ಯ ರಸ್ತೆ, ಎಂ.ಸಿ.<br /> ಲೇಔಟ್, ವಿಜಯನಗರ, ಬೆಂಗಳೂರು –560040</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಇಂದಿನ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಯೇ ಛಿದ್ರವಾಗುತ್ತಿದೆ. ಮುಂದಿನ ಪೀಳಿಗೆಯ ಪರಿಸ್ಥಿತಿ ಏನಾಗಬಹುದೆಂಬ ಆತಂಕ ಎಲ್ಲರನ್ನೂ ಕಾಡಲಾರಂಭಿಸಿದೆ’ ಎಂದು ನಟ ರಮೇಶ್ ಭಟ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಶನಿವಾರ ಸಪ್ನಾ ಬುಕ್ ಹೌಸ್ ಮತ್ತು ರೊದ್ದಂ ಕುಟುಂಬ ಆಯೋಜಿಸಿದ್ದ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮುಖ್ಯ ವ್ಯವಸ್ಥಾಪಕ ಶ್ರಿನಿವಾಸ ರೊದ್ದಂ ಅವರು ರಚಿಸಿರುವ ‘ಓಹ್ ಅವರ್ ಬ್ಯಾಂಕ್’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ಇಂದು ಬಹುತೇಕ ಮನೆಗಳಲ್ಲಿ ಹಿರಿಯರಿಲ್ಲ. ಮಕ್ಕಳಿಗೆ ಕಥೆ ಹೇಳುವವರೂ ಇಲ್ಲ. ಪತಿ– ಪತ್ನಿ ಇಬ್ಬರೂ ದುಡಿಯುವ ಒತ್ತಡಕ್ಕೆ ಬಿದ್ದು ದಿನದ ಬಹುಪಾಲನ್ನು ಸಂಚಾರ ದಟ್ಟಣೆಯಲ್ಲಿ, ಕಚೇರಿಗಳಲ್ಲಿ ಕಳೆಯುತ್ತಿದ್ದಾರೆ’ ಎಂದರು.</p>.<p>‘ಈಗಿನ ಪೀಳಿಗೆಯವರ ಜೀವನಶೈಲಿ ನೋಡಿದರೆ ನಾವೇ ಭಾಗ್ಯಶಾಲಿಗಳು ಎನಿಸುತ್ತದೆ. ಮುಂದಿನ ಪೀಳಿಗೆಯವರ ಬದುಕಿನ ಸ್ಥಿತಿ ಬಗ್ಗೆ ಯೋಚಿಸಿದರೆ ಆತಂಕ ಉಂಟಾಗುತ್ತದೆ’ ಎಂದರು.</p>.<p>ರೊದ್ದಂ ಅವರ ಕಾದಂಬರಿಗಳಿಗೆ ಓದಿಸಿಕೊಳ್ಳುವ ಗುಣವಿದೆ ಎಂದು ಕಾರ್ಪೋರೇಷನ್ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಲ್.ಗೋಪಾಲಕೃಷ್ಣ ಹೇಳಿದರು.</p>.<p><strong>ಪುಸ್ತಕ ಶೀರ್ಷಿಕೆ: ಓಹ್ ಅವರ್ ಬ್ಯಾಂಕ್ (ಕಾದಂಬರಿ)</strong><br /> ಲೇಖಕರು: ಶಿವರಾಂ ರೊದ್ದಂ<br /> ಪ್ರಕಾಶಕರು: ಸಪ್ನ ಬುಕ್ ಹೌಸ್<br /> ಬೆಲೆ: ₹350; ಪುಟ:328<br /> ಸಂಪರ್ಕ: ಛಾಯಾ ಸಾಹಿತ್ಯ, #993, 1ನೇ ಮುಖ್ಯ ರಸ್ತೆ, ಎಂ.ಸಿ.<br /> ಲೇಔಟ್, ವಿಜಯನಗರ, ಬೆಂಗಳೂರು –560040</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>