<p><strong>ಜಮ್ಮು–ಕಾಶ್ಮೀರ:</strong> ಉತ್ತರ ಭಾರತದ ಹಲವು ಭಾಗಗಳಲ್ಲಿ ಉಷ್ಣಾಂಶ ಇಳಿಕೆಯಿಂದಾಗಿ ನಿತ್ಯದ ಅಗತ್ಯ ಕೆಲಸಗಳನ್ನು ಪೂರೈಸಿಕೊಳ್ಳುವುದು, ಅತ್ಯಗತ್ಯ ವಸ್ತುಗಳನ್ನು ಪಡೆಯಲು ಪರದಾಡುವ ಸ್ಥಿತಿ ಎದುರಾಗಿದೆ.</p>.<p>ಜಮ್ಮು ಮತ್ತು ಕಾಶ್ಮೀರದ ಲೆಹ್ನಲ್ಲಿ ರಾತ್ರಿ ಉಷ್ಣತೆ –17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ನೀರಿನ ಕೊಳವೆ ಸಂಪರ್ಕ ಹೆಪ್ಪು ಗಟ್ಟಿದೆ. ಮಂಜುಗಡ್ಡೆ ಕರಗಿಸಿ ನೀರು ಪಡೆಯಲು ಕೊಳವೆ ಮಾರ್ಗದಲ್ಲಿ ಬೆಂಕಿಯಿಟ್ಟು ಬಿಸಿ ಮಾಡಲಾಗುತ್ತಿದೆ.</p>.<p>ಉತ್ತರ ಪದೇಶ, ದೆಹಲಿಯಲ್ಲಿಯೂ ದಟ್ಟ ಮಂಜು ಆವರಿಸಿರುವುದು ಭಾನುವಾರವೂ ಮುಂದುವರಿದೆ. ಹೊಂಜಿನ ಕಾರಣದಿಂದ ದೆಹಲಿ ಮಾರ್ಗದ 28 ರೈಲುಗಳ ಸಂಚಾರ ರದ್ದುಗೊಂಡಿದ್ದು, 36 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.</p>.<p>ದೆಹಲಿಯಲ್ಲಿ ದಟ್ಟ ಮಂಜಿನಿಂದ ರಸ್ತೆ ಮಾರ್ಗದ ಸಂಚಾರದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇಂದು ಕಾರು ಡಿಕ್ಕಿಯಾಗಿ ನಾಲ್ಕು ಜನರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು–ಕಾಶ್ಮೀರ:</strong> ಉತ್ತರ ಭಾರತದ ಹಲವು ಭಾಗಗಳಲ್ಲಿ ಉಷ್ಣಾಂಶ ಇಳಿಕೆಯಿಂದಾಗಿ ನಿತ್ಯದ ಅಗತ್ಯ ಕೆಲಸಗಳನ್ನು ಪೂರೈಸಿಕೊಳ್ಳುವುದು, ಅತ್ಯಗತ್ಯ ವಸ್ತುಗಳನ್ನು ಪಡೆಯಲು ಪರದಾಡುವ ಸ್ಥಿತಿ ಎದುರಾಗಿದೆ.</p>.<p>ಜಮ್ಮು ಮತ್ತು ಕಾಶ್ಮೀರದ ಲೆಹ್ನಲ್ಲಿ ರಾತ್ರಿ ಉಷ್ಣತೆ –17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ನೀರಿನ ಕೊಳವೆ ಸಂಪರ್ಕ ಹೆಪ್ಪು ಗಟ್ಟಿದೆ. ಮಂಜುಗಡ್ಡೆ ಕರಗಿಸಿ ನೀರು ಪಡೆಯಲು ಕೊಳವೆ ಮಾರ್ಗದಲ್ಲಿ ಬೆಂಕಿಯಿಟ್ಟು ಬಿಸಿ ಮಾಡಲಾಗುತ್ತಿದೆ.</p>.<p>ಉತ್ತರ ಪದೇಶ, ದೆಹಲಿಯಲ್ಲಿಯೂ ದಟ್ಟ ಮಂಜು ಆವರಿಸಿರುವುದು ಭಾನುವಾರವೂ ಮುಂದುವರಿದೆ. ಹೊಂಜಿನ ಕಾರಣದಿಂದ ದೆಹಲಿ ಮಾರ್ಗದ 28 ರೈಲುಗಳ ಸಂಚಾರ ರದ್ದುಗೊಂಡಿದ್ದು, 36 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.</p>.<p>ದೆಹಲಿಯಲ್ಲಿ ದಟ್ಟ ಮಂಜಿನಿಂದ ರಸ್ತೆ ಮಾರ್ಗದ ಸಂಚಾರದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇಂದು ಕಾರು ಡಿಕ್ಕಿಯಾಗಿ ನಾಲ್ಕು ಜನರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>