‘ಸೇತುವೆ ನಿರ್ಮಾಣಕ್ಕೂ ಮರಳಿನ ಕೊರತೆ’ ಎಂದು ವರದಿಯಾಗಿದೆ (ಪ್ರ.ವಾ., ಜ. 3). ಮರಳಿನ ಕೊರತೆಯ ಹಿಂದೆ ಮೂಢ ನಂಬಿಕೆಯ ಪಾತ್ರವನ್ನು ನಾವು ಗಮನಿಸಲೇಬೇಕಿದೆ. ಹೊಸದಾಗಿ ಕಟ್ಟಿಸಿದ ಮನೆಗಳಲ್ಲಿ ವಾಸ್ತುದೋಷ ಹುಡುಕುವ ವಾಸ್ತು ದಂಧೆಕೋರರು, ಮನೆ ಕಟ್ಟಿಸಿದವರ ನೆಮ್ಮದಿಯನ್ನೇ ಕೆಡಿಸುತ್ತಾರೆ. ಹೊಸದಾಗಿ ಕಟ್ಟಿಸಿದ ಮನೆಗಳನ್ನೇ ಕಿತ್ತು ಹಾಕಿ ಮತ್ತೆ ವಾಸ್ತು ಪ್ರಕಾರ ಕಟ್ಟಡ ಕಟ್ಟಿಸುವಲ್ಲಿ ಅನೇಕರು ಈಗ ತೊಡಗಿದ್ದಾರೆ. ಇದು ಒಬ್ಬಿಬ್ಬರ ಸಂಗತಿಯಲ್ಲ. ಅನೇಕ ಹಳ್ಳಿಗಳಲ್ಲಿ ಈ ಕೆಡವುವ–ಕಟ್ಟುವ ಕಾರ್ಯವನ್ನು ನಾವಿಂದು ಕಾಣುತ್ತಿದ್ದೇವೆ.