ಪ್ರತಿಭಟನೆ ಅಂಗವಾಗಿ 2 ಗಂಟೆ ಕಾಲ ಇಲ್ಲಿನ ಅಂಗಡಿ, ಹೋಟೆಲ್ಗಳು, ವಿವಿಧ ಉದ್ಯಮಗಳು ಬಾಗಿಲು ಮುಚ್ಚಿ ಬಂದ್ ಆಚರಿಸಿದವು. ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಕರವೇ, ಜಿ.ಪರಮೇಶ್ವರ ಯುವಕ ಸಂಘ, ಛಲವಾದಿ ಮಹಾ ಮಂಡಲ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ, ರಾಷ್ಟ್ರೀಯ ಹೆದ್ದಾರಿ 75, ಹಳೆಯ ಬಿಎಂ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಶ್ರೀಕಂಠಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.