ಬೆಂಗಳೂರು: ಉತ್ತರ ಪ್ರದೇಶದಲ್ಲಿ ಹಜ್ ಭವನದ ಗೋಡೆಗೆ ಕೇಸರಿ ಬಣ್ಣ ಬಳಿದ ಅಲ್ಲಿನ ಬಿಜೆಪಿ ಸರ್ಕಾರವನ್ನು ಖಂಡಿಸಿ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ರೈತರು ಆಲೂಗಡ್ಡೆಗಳನ್ನು ನಿಮ್ಮ ಮನೆಯಂಗಳದಲ್ಲಿ ಸುರಿದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೆ ನಿಮ್ಮ ಕೃಷಿ ಸಚಿವರು ಹೇಳುತ್ತಿರುವುದು ಏನೆಂದರೆ ಆಲೂಗಡ್ಡೆ ಉತ್ತಮ ಗುಣಮಟ್ಟದ್ದಾಗಿಲ್ಲ. ಹಾಗಾಗಿ ಈ ಪ್ರತಿಭಟನೆ ರಾಜಕೀಯ ಪ್ರೇರಿತವಾದುದು.
ನೀವು ರೈತರ ಆಕ್ರೋಶವನ್ನು ಈ ರೀತಿ ಬಿಂಬಿಸುತ್ತೀರಿ,
ಗೋಡೆಯ ಬಣ್ಣವನ್ನು ಬದಲಾಯಿಸುವುದೇ ಅಭಿವೃದ್ಧಿಯೇ (ವಿಕಾಸ್)?. ನಂತರದ್ದು ವಿಕಾಸ್. ಮಿ.ವಿಕಾಸ್ ಪೈಂಟರ್ ಆಗಿದ್ದಾರೆಯೇ? #justasking ಎಂಬ ಟಿಪ್ಪಣಿಯೊಂದನ್ನು ಪ್ರಕಾಶ್ ರಾಜ್ ಟ್ವೀಟಿಸಿದ್ದಾರೆ.