<p><strong>‘ಕಾಂಗ್ರೆಸ್ಸೇತರ ಸರಕಾರಗಳ ಬೇಜವಾಬ್ದಾರಿ ವರ್ತನೆ ಪ್ರಜಾತಂತ್ರಕ್ಕೆ ಪೆಟ್ಟು’ (ಎಸ್.ವಿ. ಜಯಶೀಲರಾವ್ ಅವರಿಂದ)</strong></p>.<p><strong>ಲಾಲ್ಬಹಾದುರ್ನಗರ, ಜ. 8–</strong> ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಬಹುತೇಕ ಕಾಂಗ್ರೆಸ್ಸೇತರ ಸರಕಾರಗಳ ಬಗ್ಗೆ ಜನತೆ ನಿರಾಶೆಗೊಳ್ಳುತ್ತಿದ್ದಾರೆಂದು ಇಂದು ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂತಿಮವಾಗಿ ಸಿದ್ಧಪಡಿಸಿದ ನಿರ್ಣಯ ತಿಳಿಸಿದೆ.</p>.<p>‘ಪರಸ್ಪರ ವಿರೋಧವಾದ ಧ್ಯೇಯೋದ್ದೇಶಗಳುಳ್ಳ ನಾನಾ ಪಕ್ಷಗಳು ಸೇರಿ ರಚಿತವಾದ ಸಮಯಸಾಧಕ ಮೈತ್ರಿಯ ದೌರ್ಬಲ್ಯ ಹಾಗೂ ಕೊರತೆಗಳನ್ನು’ ಸುದೀರ್ಘವಾಗಿ ಪ್ರಸ್ತಾಪಿಸಿರುವ ಈ ನಿರ್ಣಯ, ಪ್ರಜಾಪ್ರಭುತ್ವದಲ್ಲಿ ಅಪನಂಬಿಕೆ, ಜವಾಬ್ದಾರಿ ಸ್ಥಾನಗಳಿಂದ ಕರ್ತವ್ಯ ನಿರ್ವಹಿಸದೆ ಪಲಾಯನ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿಧಾನಗಳನ್ನು ಆಲಕ್ಷಿಸಿ, ಪ್ರಶ್ನೆಗಳನ್ನು ಬೀದಿಗೆ ಕೊಂಡೊಯ್ಯುವ ಹಿಂಸಾತ್ಮಕ ಮಾರ್ಗದ ಅವಲಂಬನೆ ಮುಂತಾದ ಆಪಾದನೆಗಳನ್ನು ಕಾಂಗ್ರೆಸ್ಸೇತರ ಸರ್ಕಾರಗಳ ಮೇಲೆ ಹೊರಿಸಿದೆ.</p>.<p><strong>ನಂಜನಗೂಡು ಬಳಿ ಇಬ್ಬರನ್ನು ಸಾಯಿಸಿದ ಆನೆಗೆ ಗುಂಡು</strong></p>.<p><strong>ನಂಜನಗೂಡು, ಜ. 8–</strong> ಸಮೀಪದ ಅರಣ್ಯದಿಂದ ತಪ್ಪಿಸಿಕೊಂಡು ಬಂದ ಆನೆಯೊಂದು ಪಾಂಡವಪುರದಲ್ಲಿ ಇಂದು ಬೆಳಿಗ್ಗೆ ಇಬ್ಬರ ಬಲಿ ತೆಗೆದುಕೊಂಡಿತು.</p>.<p>ಪಾಂಡವಪುರ ಗ್ರಾಮದ ರೈಲ್ವೆಗೇಟನ್ನು ಪುಡಿ ಮಾಡಿ ಒಳಗೆ ನುಗ್ಗಿದ ಆನೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಎಂಬಾಕೆಯನ್ನು ಕೊಂದು ಅಲ್ಲೇ ಆಡುತ್ತಿದ್ದ ಮೂರು ವರ್ಷದ ಮಗುವೊಂದನ್ನು ಮನೆಯ ಜಗುಲಿಯೊಂದರತ್ತ ಎತ್ತಿ ಎಸೆಯಿತು.</p>.<p>ಇನ್ನೊಂದು ಗ್ರಾಮದ ಸಿದ್ದಯ್ಯ ಎಂಬುವನ ಮೇಲೂ ಆನೆ ದಾಳಿ ನಡೆಸಿ ಆತನನ್ನು ತೀವ್ರ ಗಾಯಗೊಳಿಸಿತು. ಈಗ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿರುವ ಸಿದ್ದಯ್ಯನ ಸ್ಥಿತಿ ಶೋಚನೀಯವಾಗಿದೆ.</p>.<p><strong>ಚಿಕ್ಕಮಗಳೂರಿನಲ್ಲಿ ಮತ್ತೆ ಅಗ್ನಿಸ್ಪರ್ಶ ಲೂಟಿ ಪ್ರಕರಣ</strong></p>.<p><strong>ಚಿಕ್ಕಮಗಳೂರು, ಜ. 8– </strong>ಈ ದಿನ ಬೆಳಿಗ್ಗೆ ಊರಿನ ರಸ್ತೆಗಳಲ್ಲಿ ಜನರು ಎಂದಿನಂತೆ ನಿರ್ಭಯವಾಗಿ ಓಡಾಡುತ್ತಿದ್ದಂತೆಯೇ ಒಂದು ಮತದ ಜನರನ್ನು ಇರಿಯಲಾಯಿತೆಂಬ ಸುದ್ದಿ ಹಠಾತ್ತನೆ ಹಬ್ಬಿ, ಷರೀಫ್ ಗಲ್ಲಿಯಲ್ಲಿ ಪರಿಸ್ಥಿತಿ ತೀವ್ರ ಸ್ವರೂಪವನ್ನು ತಾಳಿತು. ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಇಲ್ಲಿನ ಉದ್ರಿಕ್ತ ಜನರನ್ನು ಚದುರಿಸಿದರು.</p>.<p>ಕಳೆದ ಶನಿವಾರ ಇಲ್ಲಿ ನಡೆದ ಮತೀಯ ಘರ್ಷಣೆಗಳ ತರುವಾಯ, ನಿನ್ನೆ ಇಲ್ಲಿ ಜಿಲ್ಲಾಧಿಕಾರಿ ಶ್ರೀ ಜಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸ್ಥಾಪನೆಗಾಗಿ ಶಾಂತಿ ಸಮಿತಿ ಸೇರಿ ತೀರ್ಮಾನ ಕೈಗೊಂಡ ಫಲವಾಗಿ ರಾತ್ರಿ ಪರಿಸ್ಥಿತಿ ಶಾಂತವಾಗಿತ್ತು.</p>.<p><strong>ಆಂಧ್ರ–ಕರ್ನಾಟಕ ಮೈತ್ರಿ ಭವನ ಶಂಕುಸ್ಥಾಪನೆ (ಎಸ್.ವಿ. ಜಯಶೀಲರಾವ್ ಅವರಿಂದ)</strong></p>.<p><strong>ಲಾಲ್ಬಹಾದುರ್ನಗರ, ಜ. 8–</strong> ಶತಮಾನಗಳ ಕರ್ನಾಟಕ – ಆಂಧ್ರ ಐತಿಹಾಸಿಕ ಸ್ನೇಹದ ಸಂಕೇತವಾಗಿ ನಿರ್ಮಾಣವಾಗಲಿರುವ ‘ಮೈತ್ರಿ ಭವನ’ದ ಶಂಕುಸ್ಥಾಪನೆಯನ್ನು ನೂತನ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ನೆರವೇರಿಸಿದರು.</p>.<p>ಶ್ರೀ ನಿಜಲಿಂಗಪ್ಪ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದ ರೆಡ್ಡಿ ಅವರುಗಳು ಕಟ್ಟಡದ ನಿಧಿಗೆ ತಲಾ 1001 ರೂಪಾಯಿ ಕಾಣಿಕೆ ನೀಡಿದರು.</p>.<p>1956ರಲ್ಲಿ ಸ್ಥಾಪಿತವಾದ ಕನ್ನಡ ಮೈತ್ರಿ ಸಂಘ ಐದೂವರೆ ಲಕ್ಷ ರೂಪಾಯಿ ಖರ್ಚಿನಲ್ಲಿ ಭವನವೊಂದನ್ನು ನಿರ್ಮಿಸಲಿದೆ.</p>.<p>ಕನ್ನಡಿಗರು ಇಲ್ಲಿ ಬಂದು ನೆಲೆಸಿ ಹೈದರಾಬಾದಿನ ಜೀವನದ ಒಂದು ಭಾಗವಾಗಿ ಮಿಲನಗೊಂಡಿರುವುದಕ್ಕಾಗಿ ಶ್ರೀ ನಿಜಲಿಂಗಪ್ಪ ಅವರು ಇಲ್ಲಿನ ಕನ್ನಡಿಗರನ್ನು ಅಭಿನಂದಿಸಿದರು.</p>.<p><strong>ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮತ್ತೆ ಸೋಷಲಿಸ್ಟ್ ಗುಂಪಿನ ಆಗ್ರಹ</strong></p>.<p><strong>ಲಾಲ್ಬಹಾದುರ್ನಗರ, ಜ. 8–</strong> ಬ್ಯಾಂಕ್ ಮತ್ತು ಸಾಮಾನ್ಯ ವಿಮೆ ರಾಷ್ಟ್ರೀಕರಣಕ್ಕೆ ಸೋಷಲಿಸ್ಟ್ ಕಾರ್ಯಕ್ರಮ ಪ್ರತಿಪಾದಿಸುವ ಕಾಂಗ್ರೆಸ್ ವೇದಿಕೆ ಇಂದು ಮತ್ತೊಮ್ಮೆ ತನ್ನ ಸಮಾವೇಶವೊಂದರಲ್ಲಿ ಒತ್ತಾಯ ಮಾಡಿತು.</p>.<p>ಪಕ್ಷ ರೂಪಿಸಿಕೊಂಡಿರುವ ಧ್ಯೇಯೋದ್ದೇಶಗಳ ಸಿದ್ಧಿಗಾಗಿ ತರುಣ ಕಾಂಗ್ರೆಸ್ಸಿಗರು ಮುನ್ನಡೆಯಬೇಕೆಂದು ಸಮಾವೇಶವನ್ನು ಉದ್ಘಾಟಿಸಿದ ಕೇಂದ್ರ ಆಹಾರ ಸಚಿವ ಶ್ರೀ ಜಗಜೀವನ ರಾಂ ಕರೆಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಕಾಂಗ್ರೆಸ್ಸೇತರ ಸರಕಾರಗಳ ಬೇಜವಾಬ್ದಾರಿ ವರ್ತನೆ ಪ್ರಜಾತಂತ್ರಕ್ಕೆ ಪೆಟ್ಟು’ (ಎಸ್.ವಿ. ಜಯಶೀಲರಾವ್ ಅವರಿಂದ)</strong></p>.<p><strong>ಲಾಲ್ಬಹಾದುರ್ನಗರ, ಜ. 8–</strong> ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಬಹುತೇಕ ಕಾಂಗ್ರೆಸ್ಸೇತರ ಸರಕಾರಗಳ ಬಗ್ಗೆ ಜನತೆ ನಿರಾಶೆಗೊಳ್ಳುತ್ತಿದ್ದಾರೆಂದು ಇಂದು ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂತಿಮವಾಗಿ ಸಿದ್ಧಪಡಿಸಿದ ನಿರ್ಣಯ ತಿಳಿಸಿದೆ.</p>.<p>‘ಪರಸ್ಪರ ವಿರೋಧವಾದ ಧ್ಯೇಯೋದ್ದೇಶಗಳುಳ್ಳ ನಾನಾ ಪಕ್ಷಗಳು ಸೇರಿ ರಚಿತವಾದ ಸಮಯಸಾಧಕ ಮೈತ್ರಿಯ ದೌರ್ಬಲ್ಯ ಹಾಗೂ ಕೊರತೆಗಳನ್ನು’ ಸುದೀರ್ಘವಾಗಿ ಪ್ರಸ್ತಾಪಿಸಿರುವ ಈ ನಿರ್ಣಯ, ಪ್ರಜಾಪ್ರಭುತ್ವದಲ್ಲಿ ಅಪನಂಬಿಕೆ, ಜವಾಬ್ದಾರಿ ಸ್ಥಾನಗಳಿಂದ ಕರ್ತವ್ಯ ನಿರ್ವಹಿಸದೆ ಪಲಾಯನ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿಧಾನಗಳನ್ನು ಆಲಕ್ಷಿಸಿ, ಪ್ರಶ್ನೆಗಳನ್ನು ಬೀದಿಗೆ ಕೊಂಡೊಯ್ಯುವ ಹಿಂಸಾತ್ಮಕ ಮಾರ್ಗದ ಅವಲಂಬನೆ ಮುಂತಾದ ಆಪಾದನೆಗಳನ್ನು ಕಾಂಗ್ರೆಸ್ಸೇತರ ಸರ್ಕಾರಗಳ ಮೇಲೆ ಹೊರಿಸಿದೆ.</p>.<p><strong>ನಂಜನಗೂಡು ಬಳಿ ಇಬ್ಬರನ್ನು ಸಾಯಿಸಿದ ಆನೆಗೆ ಗುಂಡು</strong></p>.<p><strong>ನಂಜನಗೂಡು, ಜ. 8–</strong> ಸಮೀಪದ ಅರಣ್ಯದಿಂದ ತಪ್ಪಿಸಿಕೊಂಡು ಬಂದ ಆನೆಯೊಂದು ಪಾಂಡವಪುರದಲ್ಲಿ ಇಂದು ಬೆಳಿಗ್ಗೆ ಇಬ್ಬರ ಬಲಿ ತೆಗೆದುಕೊಂಡಿತು.</p>.<p>ಪಾಂಡವಪುರ ಗ್ರಾಮದ ರೈಲ್ವೆಗೇಟನ್ನು ಪುಡಿ ಮಾಡಿ ಒಳಗೆ ನುಗ್ಗಿದ ಆನೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಎಂಬಾಕೆಯನ್ನು ಕೊಂದು ಅಲ್ಲೇ ಆಡುತ್ತಿದ್ದ ಮೂರು ವರ್ಷದ ಮಗುವೊಂದನ್ನು ಮನೆಯ ಜಗುಲಿಯೊಂದರತ್ತ ಎತ್ತಿ ಎಸೆಯಿತು.</p>.<p>ಇನ್ನೊಂದು ಗ್ರಾಮದ ಸಿದ್ದಯ್ಯ ಎಂಬುವನ ಮೇಲೂ ಆನೆ ದಾಳಿ ನಡೆಸಿ ಆತನನ್ನು ತೀವ್ರ ಗಾಯಗೊಳಿಸಿತು. ಈಗ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿರುವ ಸಿದ್ದಯ್ಯನ ಸ್ಥಿತಿ ಶೋಚನೀಯವಾಗಿದೆ.</p>.<p><strong>ಚಿಕ್ಕಮಗಳೂರಿನಲ್ಲಿ ಮತ್ತೆ ಅಗ್ನಿಸ್ಪರ್ಶ ಲೂಟಿ ಪ್ರಕರಣ</strong></p>.<p><strong>ಚಿಕ್ಕಮಗಳೂರು, ಜ. 8– </strong>ಈ ದಿನ ಬೆಳಿಗ್ಗೆ ಊರಿನ ರಸ್ತೆಗಳಲ್ಲಿ ಜನರು ಎಂದಿನಂತೆ ನಿರ್ಭಯವಾಗಿ ಓಡಾಡುತ್ತಿದ್ದಂತೆಯೇ ಒಂದು ಮತದ ಜನರನ್ನು ಇರಿಯಲಾಯಿತೆಂಬ ಸುದ್ದಿ ಹಠಾತ್ತನೆ ಹಬ್ಬಿ, ಷರೀಫ್ ಗಲ್ಲಿಯಲ್ಲಿ ಪರಿಸ್ಥಿತಿ ತೀವ್ರ ಸ್ವರೂಪವನ್ನು ತಾಳಿತು. ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಇಲ್ಲಿನ ಉದ್ರಿಕ್ತ ಜನರನ್ನು ಚದುರಿಸಿದರು.</p>.<p>ಕಳೆದ ಶನಿವಾರ ಇಲ್ಲಿ ನಡೆದ ಮತೀಯ ಘರ್ಷಣೆಗಳ ತರುವಾಯ, ನಿನ್ನೆ ಇಲ್ಲಿ ಜಿಲ್ಲಾಧಿಕಾರಿ ಶ್ರೀ ಜಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸ್ಥಾಪನೆಗಾಗಿ ಶಾಂತಿ ಸಮಿತಿ ಸೇರಿ ತೀರ್ಮಾನ ಕೈಗೊಂಡ ಫಲವಾಗಿ ರಾತ್ರಿ ಪರಿಸ್ಥಿತಿ ಶಾಂತವಾಗಿತ್ತು.</p>.<p><strong>ಆಂಧ್ರ–ಕರ್ನಾಟಕ ಮೈತ್ರಿ ಭವನ ಶಂಕುಸ್ಥಾಪನೆ (ಎಸ್.ವಿ. ಜಯಶೀಲರಾವ್ ಅವರಿಂದ)</strong></p>.<p><strong>ಲಾಲ್ಬಹಾದುರ್ನಗರ, ಜ. 8–</strong> ಶತಮಾನಗಳ ಕರ್ನಾಟಕ – ಆಂಧ್ರ ಐತಿಹಾಸಿಕ ಸ್ನೇಹದ ಸಂಕೇತವಾಗಿ ನಿರ್ಮಾಣವಾಗಲಿರುವ ‘ಮೈತ್ರಿ ಭವನ’ದ ಶಂಕುಸ್ಥಾಪನೆಯನ್ನು ನೂತನ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ನೆರವೇರಿಸಿದರು.</p>.<p>ಶ್ರೀ ನಿಜಲಿಂಗಪ್ಪ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದ ರೆಡ್ಡಿ ಅವರುಗಳು ಕಟ್ಟಡದ ನಿಧಿಗೆ ತಲಾ 1001 ರೂಪಾಯಿ ಕಾಣಿಕೆ ನೀಡಿದರು.</p>.<p>1956ರಲ್ಲಿ ಸ್ಥಾಪಿತವಾದ ಕನ್ನಡ ಮೈತ್ರಿ ಸಂಘ ಐದೂವರೆ ಲಕ್ಷ ರೂಪಾಯಿ ಖರ್ಚಿನಲ್ಲಿ ಭವನವೊಂದನ್ನು ನಿರ್ಮಿಸಲಿದೆ.</p>.<p>ಕನ್ನಡಿಗರು ಇಲ್ಲಿ ಬಂದು ನೆಲೆಸಿ ಹೈದರಾಬಾದಿನ ಜೀವನದ ಒಂದು ಭಾಗವಾಗಿ ಮಿಲನಗೊಂಡಿರುವುದಕ್ಕಾಗಿ ಶ್ರೀ ನಿಜಲಿಂಗಪ್ಪ ಅವರು ಇಲ್ಲಿನ ಕನ್ನಡಿಗರನ್ನು ಅಭಿನಂದಿಸಿದರು.</p>.<p><strong>ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮತ್ತೆ ಸೋಷಲಿಸ್ಟ್ ಗುಂಪಿನ ಆಗ್ರಹ</strong></p>.<p><strong>ಲಾಲ್ಬಹಾದುರ್ನಗರ, ಜ. 8–</strong> ಬ್ಯಾಂಕ್ ಮತ್ತು ಸಾಮಾನ್ಯ ವಿಮೆ ರಾಷ್ಟ್ರೀಕರಣಕ್ಕೆ ಸೋಷಲಿಸ್ಟ್ ಕಾರ್ಯಕ್ರಮ ಪ್ರತಿಪಾದಿಸುವ ಕಾಂಗ್ರೆಸ್ ವೇದಿಕೆ ಇಂದು ಮತ್ತೊಮ್ಮೆ ತನ್ನ ಸಮಾವೇಶವೊಂದರಲ್ಲಿ ಒತ್ತಾಯ ಮಾಡಿತು.</p>.<p>ಪಕ್ಷ ರೂಪಿಸಿಕೊಂಡಿರುವ ಧ್ಯೇಯೋದ್ದೇಶಗಳ ಸಿದ್ಧಿಗಾಗಿ ತರುಣ ಕಾಂಗ್ರೆಸ್ಸಿಗರು ಮುನ್ನಡೆಯಬೇಕೆಂದು ಸಮಾವೇಶವನ್ನು ಉದ್ಘಾಟಿಸಿದ ಕೇಂದ್ರ ಆಹಾರ ಸಚಿವ ಶ್ರೀ ಜಗಜೀವನ ರಾಂ ಕರೆಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>