ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಖಲೆಗಳಲ್ಲಿ ‘ವೀರಶೈವ’ ಎಂದಿದ್ದರೆ ಸಾಬೀತುಪಡಿಸಿ’

ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡರಿಗೆ ಸಚಿವ ಎಂ.ಬಿ.ಪಾಟೀಲ ಸವಾಲು
Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ 17 ಸಾವಿರ ಸದಸ್ಯರಿದ್ದಾರೆ. ಇವರ ಪೈಕಿ ಶೇ 5ರಷ್ಟು ಜನರ ಜನ್ಮದಾಖಲೆಯಲ್ಲಿ (1999ಕ್ಕೂ ಮೊದಲಿನ) ವೀರಶೈವ ಅಥವಾ ವೀರಶೈವ ಲಿಂಗಾಯತ ಎಂದು ನಮೂದಾಗಿದ್ದನ್ನು ಸಾಬೀತುಪಡಿಸಿದರೂ ತಾವು ಮಹಾಸಭಾದ ನಿಲುವಿಗೆ ತಲೆಬಾಗುವುದಾಗಿ ಸಚಿವ ಎಂ.ಬಿ. ಪಾಟೀಲ ಸೋಮವಾರ ಇಲ್ಲಿ ಹೇಳಿದರು.

ಈ ವಿಷಯವಾಗಿ, ಮಹಾಸಭಾದ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎನ್‌. ತಿಪ್ಪಣ್ಣ ಅವರಿಗೆ ಸವಾಲು ಹಾಕುವುದಾಗಿ ಹೇಳಿದ ಅವರು, ತಮ್ಮ ಸವಾಲು ಸ್ವೀಕರಿಸಿ ದಾಖಲೆಗಳಲ್ಲಿ ಏನಿದೆ ಎಂಬುದನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.

‘ಮಹಾಸಭಾದ ಬಹುತೇಕರ ಜನ್ಮ ದಾಖಲೆಗಳಲ್ಲಿ ಲಿಂಗಾಯತ ಎಂದೇ ನಮೂದಾಗಿದೆ. ಆದರೆ, ಸಾಫ್ಟ್‌ವೇರ್‌ನ ತಾಂತ್ರಿಕ ದೋಷದಿಂದ 1999ರಿಂದ ಈಚೆಗೆ ಮಾತ್ರ ವೀರಶೈವ ಲಿಂಗಾಯತ ಎಂದೇ ನಮೂದಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT