‘ಸ್ಥಳೀಯ ಕೇಂದ್ರಗಳ ಮೂಲಕ ರೈತರು ಕೃಷಿ ಸಾಮಗ್ರಿಗಳನ್ನು ಕಾಯ್ದಿರಿಸಬಹುದು. ಬೆಳೆಗಳ ಬಗ್ಗೆ, ಕೀಟ ಬಾಧೆಯಿಂದ ರಕ್ಷಣೆ ಪಡೆಯುವ ಬಗ್ಗೆ ಮಾಹಿತಿ ಪಡೆಯಬಹುದು. ಅವರ ಮೊಬೈಲ್ಗಳಿಗೆ ಸಂದೇಶ ರವಾನಿಸುವ ಸೌಲಭ್ಯವೂ ಇದೆ. ರೈತರು ಬಿತ್ತನೆಯಿಂದ ಕಟಾವಿನವರೆಗಿನ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಹಂಚಿಕೊಳ್ಳಬಹುದು. ಕೃಷಿ ಉತ್ಪನ್ನ ಖರೀದಿ ಮಾಡುವವರಿಗೆ ಈ ಮಾಹಿತಿ ರವಾನಿಸಲಾಗುತ್ತದೆ. ಇದು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ರೈತರಿಗೆ ನೆರವಾಗಲಿದೆ’ ಎಂದು ತಿಳಿಸಿದರು.