ಕಲಾವಿದರು ಪ್ರದರ್ಶಿಸಿದ ದೊಡ್ಡಾಟ ಕಂಡು ಮನಸ್ಸು ಬಾಲ್ಯದೆಡೆಗೆ ಓಡುತ್ತಿತ್ತು. ಈ ಹಿಂದೆ ಹಳ್ಳಿಗಳಲ್ಲಿ ಬೇಸಿಗೆ ಬಂತೆಂದರೆ ದೊಡ್ಡಾಟದ ತಂಡಗಳು ಹಳ್ಳಿ-, ಹಳ್ಳಿಗಳಲ್ಲಿ ಪ್ರದರ್ಶನವಾಗುತ್ತಿದ್ದವು. ಅನೇಕ ಕಡೆ ಹಳ್ಳಿಯ ಯುವಕರೇ ಸೇರಿ ಪ್ರಸಂಗಗಳನ್ನು ಆಡುವುದಿತ್ತು. ಇಂಥ ಅನೇಕ ದೊಡ್ಡಾಟಗಳನ್ನು ನೋಡುತ್ತಿದ್ದವು. ಕಥಾ ಪ್ರಸಂಗಗಳು ಕೇವಲ ಮನೋರಂಜನೆಯನ್ನು ನೀಡದೇ ನೀತಿಯನ್ನೂ ಹೇಳುತ್ತಿದ್ದವು ಎಂದರು.