‘ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಸಕಲ ಸಿದ್ದತೆ ಕೈಗೊಂಡು ಗ್ರಾಮಸ್ಥರಿಗೆ ಸಹಕಾರ ನೀಡಬೇಕು. ಭೂಮಿಯ ಬಹುಭಾಗ ವ್ಯಾಪಿಸಿರುವ ಬಂಡೆಗಲ್ಲಿನ ಮೇಲೆ ನಿರ್ಮಾಣಗೊಂಡ ಮನೆಗಳಿಗೆ ಯಾವುದೇ ತೊಂದರೆಗಳಿಲ್ಲ, ಭೂಕಂಪ ಅಥವಾ ಇನ್ನಿತರ ಸ್ಪೋಟಕ ಚಟುವಟಿಕೆಗಳಿಂದ ಅಪಾಯವಾಗಬಹುದು. ಅನಾಹುತ ಸಂಭವಿಸುವ ಮುನ್ನ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಹರಿಸಲು ಮುಂದಾಗಬೇಕು’ ಎಂದು ಅವರು ತಿಳಿಸಿದರು.