ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಗೆ ವೈಟ್ಫೀಲ್ಡ್ ಉಪವಿಭಾಗದ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಯಾಗಿದೆ.
ಐದು ವರ್ಷಗಳಿಂದ ಬೆಳ್ಳಂದೂರಿನ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಜಿತಾಬ್, ಡಿ.18ರಿಂದ ಕಣ್ಮರೆಯಾಗಿದ್ದಾರೆ.
‘ದೂರು ಕೊಟ್ಟರೂ ಮಗನ ಪತ್ತೆಗೆ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಅಜಿತಾಬ್ ತಂದೆ ಎ.ಕೆ.ಸಿನ್ಹ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡುವಂತೆ ಸೂಚಿಸಿತ್ತು
ಅಂತೆಯೇ ಬುಧವಾರ ವಿಶೇಷ ತನಿಖಾ ತಂಡ ರಚನೆಯಾಗಿದ್ದು, ಅದರಲ್ಲಿ ಡಿಸಿಪಿ, ಇಬ್ಬರು ಎಸಿಪಿ, ಐದು ಇನ್ಸ್ಪೆಕ್ಟರ್ ಹಾಗೂ ಎಂಟು ಪಿಎಸ್ಐಗಳು ಇದ್ದಾರೆ.