ಘಟಕದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಅಂಬರ ಚುಂಬನ ಗಡಿಯಾರ ಗೋಪುರ, ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿ, ರಣಧೀರ ಕಂಠೀರವ ಉದ್ಯಾನ, ಚೈತನ್ಯ ಉದ್ಯಾನ, ಚಂದವಳ್ಳಿಯ ತೋಟ, ಧನ್ವಂತರಿ ವನ ಹಾಗೂ ಸಂಜೀವಿನಿ ವನಗಳಲ್ಲಿ ಅಳವಡಿಸಿರುವ ದೀಪಗಳು, ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಆಲಂಕಾರಿಕಾ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತದೆ. ಜತೆಗೆ, 6 ಕೊಳವೆಬಾವಿಗಳ ಪಂಪ್ಸೆಟ್ಗಳಿಗೂ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಬೆಸ್ಕಾಂಗೆ ಪ್ರತಿ ತಿಂಗಳು ಪಾವತಿಸುತ್ತಿದ್ದ ಸುಮಾರು ₹4 ಲಕ್ಷ ಉಳಿತಾಯವಾಗಲಿದೆ ಎಂದರು.