ಬಾಗಲಕೋಟೆ: ಬೀಳಗಿ ತಾಲ್ಲೂಕು ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ ವತಿಯಿಂದ ದಿವಂಗತ ಈರಮ್ಮ ಹಾಗೂ ರುದ್ರಗೌಡ ಪಾಟೀಲ ಅವರ ಸ್ಮರಣೆಗಾಗಿ ನೀಡುವ ಅಬ್ಬೆ ಹಾಗೂ ಕೃಷಿ ಪ್ರಶಸ್ತಿಗೆ ಕ್ರಮವಾಗಿ ಡಾ.ಮಲ್ಲಮ್ಮ ಶಿವಾನಂದ ಯಾಳವಾರ ಹಾಗೂ ಸಂಗಯ್ಯ ಮುಕ್ಕಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಬಾಡಗಂಡಿಯ ಬಾಪೂಜಿ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಇದೇ 26ರಂದು ನಡೆಯುವ 'ಸಾರ್ಥಕ ಸಂಭ್ರಮ-' ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.