‘ಸಮಾರಂಭಕ್ಕೆ ಅಡ್ಡಿ ನಿವಾರಿಸಲು ಹೋಮ ನಡೆಸಲಾಯಿತೇ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಪಯಜ್ಞದ ಸಂದರ್ಭದಲ್ಲಿ ಬಚಾವಾಗಲು ಮುಂದಾದ ತಕ್ಷಕ, ಇಂದ್ರನನ್ನು ಹೋಗಿ ಹಿಡಿದುಕೊಂಡಿದ್ದ. ಆಗ ತಕ್ಷಕನ ಸಹಿತ ಇಂದ್ರನನ್ನು ಯಜ್ಞಕ್ಕೆ ಆಹುತಿ ನೀಡಲು ಯಾಜ್ಞಿಕರು ಮಂತ್ರ ಪಠಣ ಮಾಡಿದ್ದರು. ಇಂದು ನಾವೂ ಅದೇ ರೀತಿ ಯಜ್ಞ ಮಾಡಿದ್ದೇವೆ’ ಎಂದು ಹೇಳಿದರು.