ಈ ಹಿಂದೆ ಉಚ್ಛ ನ್ಯಾಯಾಲಯವು ಸಾರ್ವಜನಿಕ ಹಿತಾಶಕ್ತಿಯ ಅರ್ಜಿ ಸಲ್ಲಿಕೆಯ ಅನುಸಾರ ಕೆರೆಯನ್ನು ಸ್ವಾಧೀನ ಪಡಿಸಿಕೊಂಡು ಒತ್ತುವರಿದಾರನಿಗೆ ₹10,000 ದಂಡ ವಿಧಿಸುವಂತೆ ಆದೇಶ ನೀಡಿತ್ತು. ಸುಮಾರು 2 ಎಕರೆ ಪ್ರದೇಶದ ಈ ಕೆರೆಯನ್ನು ಕಳೆದ 2 ದಶಕಗಳಿಂದ ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡು ಬಂದಿದ್ದು , ಇದೀಗ ಅಡಿಕೆ ಗಿಡಗಳನ್ನು ನೆಟ್ಟು ಸಂಪೂರ್ಣ ಒತ್ತುವರಿಗೆ ಸನ್ನದ್ಧರಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.