<p><strong>ಬೆಂಗಳೂರು: </strong>ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಮಾಜ ಸೇವೆಯ ಕುರಿತು ಕೆಪಿಜೆಪಿ ಮುಖಂಡ ಉಪೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.</p>.<p>ಜ.31ರಂದು ಉಪೇಂದ್ರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ರಾಜಕೀಯ, ಪಕ್ಷದ ಉದ್ದೇಶ, ಸಮಾಜ ಸೇವೆ ಕುರಿತು ಚರ್ಚಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೊವನ್ನು ಉಪೇಂದ್ರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.</p>.<p>‘ಗ್ರಾಮವೊಂದು ಮಂದಿರ, ದೇಶವೊಂದು ಮಂದಿರ, ಜನತೆಯ ಸೇವೆಯೇ ದೇವರ ಆರಾಧನೆ...ನಿಮ್ಮ ಕಾರ್ಯ ಮುಂದುವರಿಸಿ..’ ಎಂದು ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ.</p>.<p></p><p>‘ಸಂವಿಧಾನದಲ್ಲಿ ಇರುವುದು ವ್ಯಕ್ತಿಗೆ ಆದ್ಯತೆ ಇರುವುದು ಪಕ್ಷಕ್ಕಲ್ಲ...ಆದರೆ, ಚುನಾವಣೆ ಎಂದರೆ ಪಕ್ಷ ಮುಖ್ಯವಾಗಿ ಹೋಗಿದೆ. ಪಕ್ಷ ಮತ್ತು ಚಿಹ್ನೆ ಇಲ್ಲದೆ ಚುನಾವಣಾ ಆಯೋಗದಿಂದ ಅನುಮತಿ ದೊರೆಯುವುದಿಲ್ಲ...’ </p><p>ಭ್ರಷ್ಟಾಚಾರಮುಕ್ತ, ಪ್ರಜೆಗಳ ಸರ್ಕಾರದ ಸಾಕಾರದ ಕುರಿತು ಚರ್ಚೆ ನಡೆದಿದೆ.</p><p>ಮಾರ್ಚ್ 23ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಘೋಷಿಸಿದ್ದರು.</p><p><iframe allow="autoplay; encrypted-media" allowfullscreen="" frameborder="0" height="315" src="https://www.youtube.com/embed/0mTyG-l6ELM" width="560"/></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಮಾಜ ಸೇವೆಯ ಕುರಿತು ಕೆಪಿಜೆಪಿ ಮುಖಂಡ ಉಪೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.</p>.<p>ಜ.31ರಂದು ಉಪೇಂದ್ರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ರಾಜಕೀಯ, ಪಕ್ಷದ ಉದ್ದೇಶ, ಸಮಾಜ ಸೇವೆ ಕುರಿತು ಚರ್ಚಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೊವನ್ನು ಉಪೇಂದ್ರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.</p>.<p>‘ಗ್ರಾಮವೊಂದು ಮಂದಿರ, ದೇಶವೊಂದು ಮಂದಿರ, ಜನತೆಯ ಸೇವೆಯೇ ದೇವರ ಆರಾಧನೆ...ನಿಮ್ಮ ಕಾರ್ಯ ಮುಂದುವರಿಸಿ..’ ಎಂದು ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ.</p>.<p></p><p>‘ಸಂವಿಧಾನದಲ್ಲಿ ಇರುವುದು ವ್ಯಕ್ತಿಗೆ ಆದ್ಯತೆ ಇರುವುದು ಪಕ್ಷಕ್ಕಲ್ಲ...ಆದರೆ, ಚುನಾವಣೆ ಎಂದರೆ ಪಕ್ಷ ಮುಖ್ಯವಾಗಿ ಹೋಗಿದೆ. ಪಕ್ಷ ಮತ್ತು ಚಿಹ್ನೆ ಇಲ್ಲದೆ ಚುನಾವಣಾ ಆಯೋಗದಿಂದ ಅನುಮತಿ ದೊರೆಯುವುದಿಲ್ಲ...’ </p><p>ಭ್ರಷ್ಟಾಚಾರಮುಕ್ತ, ಪ್ರಜೆಗಳ ಸರ್ಕಾರದ ಸಾಕಾರದ ಕುರಿತು ಚರ್ಚೆ ನಡೆದಿದೆ.</p><p>ಮಾರ್ಚ್ 23ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಘೋಷಿಸಿದ್ದರು.</p><p><iframe allow="autoplay; encrypted-media" allowfullscreen="" frameborder="0" height="315" src="https://www.youtube.com/embed/0mTyG-l6ELM" width="560"/></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>