<p><strong>ಮುಂಬೈ:</strong> ನಾಲ್ಕನೇ ಬಾರಿ 19 ವರ್ಷದೊಳಗಿನವರ <a href="http://www.prajavani.net/news/article/2018/02/04/551881.html" target="_blank">ವಿಶ್ವಕಪ್ </a>ಕ್ರಿಕೆಟ್ ಜಯಿಸಿದ ಭಾರತ ತಂಡಕ್ಕೆ ನೀಡಿದ ನಗದು ಬಹುಮಾನದಲ್ಲಿ ತಾರತಮ್ಯ ಎಸಗಿರುವ ಬಗ್ಗೆ ತಂಡದ ಪ್ರಧಾನ ಕೋಚ್ <a href="http://www.prajavani.net/news//article/2018/02/03/551713.html" target="_blank">ರಾಹುಲ್ ದ್ರಾವಿಡ್</a> ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ವಿಜೇತ ತಂಡದ ಪ್ರಧಾನ ಕೋಚ್ <a href="http://www.prajavani.net/news/article/2018/02/03/551683.html" target="_blank">ರಾಹುಲ್ ದ್ರಾವಿಡ್</a> ಅವರಿಗೆ ₹ 50 ಲಕ್ಷ, ಸಹಾಯಕ ಸಿಬ್ಬಂದಿಗೆ ₹ 20 ಲಕ್ಷ ಮತ್ತು ಆಟಗಾರರಿಗೆ ₹ 30 ಲಕ್ಷ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿತ್ತು.</p>.<p>ಸಹಾಯಕ ಸಿಬ್ಬಂದಿಗೆ ಕಡಿಮೆ ನಗದು ಬಹುಮಾನ ನೀಡಿ ತಮಗೆ ಮಾತ್ರ ಹೆಚ್ಚು ಘೋಷಿಸಿದ್ದಕ್ಕೆ ದ್ರಾವಿಡ್ ಬೇಸರಗೊಂಡಿದ್ದಾರೆ. ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಬಹುಮಾನ ನೀಡಬೇಕು ಎಂದು ಅವರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>ವಿಶ್ವಕಪ್ ಗೆದ್ದಿರುವುದರ ಹಿಂದೆ ಎಲ್ಲ ಸಿಬ್ಬಂದಿಯ ಶ್ರಮವಿದೆ. ಎಲ್ಲರೂ ಒಂದು ತಂಡವಾಗಿ ದುಡಿದಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ ಎನ್ನಲಾಗಿದೆ.</p>.<p>ವಿಶ್ವಕಪ್ ಫೈನಲ್ನಲ್ಲಿ ಜಯಗಳಿಸಿ ನ್ಯೂಜಿಲೆಂಡ್ನಿಂದ ಸ್ವದೇಶಕ್ಕೆ ಮರಳಿದ ಸಂದರ್ಭ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲೂ ದ್ರಾವಿಡ್ ‘ಇದು ಸಾಂಘಿಕ ಜಯ. ತೆರೆಯ ಹಿಂದೆ ಕೆಲಸ ಮಾಡಿದ ಎಲ್ಲ ಸಿಬ್ಬಂದಿಗೂ ಇದರ ಶ್ರೇಯ ಸಲ್ಲಬೇಕು’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ನಾಲ್ಕನೇ ಬಾರಿ 19 ವರ್ಷದೊಳಗಿನವರ <a href="http://www.prajavani.net/news/article/2018/02/04/551881.html" target="_blank">ವಿಶ್ವಕಪ್ </a>ಕ್ರಿಕೆಟ್ ಜಯಿಸಿದ ಭಾರತ ತಂಡಕ್ಕೆ ನೀಡಿದ ನಗದು ಬಹುಮಾನದಲ್ಲಿ ತಾರತಮ್ಯ ಎಸಗಿರುವ ಬಗ್ಗೆ ತಂಡದ ಪ್ರಧಾನ ಕೋಚ್ <a href="http://www.prajavani.net/news//article/2018/02/03/551713.html" target="_blank">ರಾಹುಲ್ ದ್ರಾವಿಡ್</a> ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ವಿಜೇತ ತಂಡದ ಪ್ರಧಾನ ಕೋಚ್ <a href="http://www.prajavani.net/news/article/2018/02/03/551683.html" target="_blank">ರಾಹುಲ್ ದ್ರಾವಿಡ್</a> ಅವರಿಗೆ ₹ 50 ಲಕ್ಷ, ಸಹಾಯಕ ಸಿಬ್ಬಂದಿಗೆ ₹ 20 ಲಕ್ಷ ಮತ್ತು ಆಟಗಾರರಿಗೆ ₹ 30 ಲಕ್ಷ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿತ್ತು.</p>.<p>ಸಹಾಯಕ ಸಿಬ್ಬಂದಿಗೆ ಕಡಿಮೆ ನಗದು ಬಹುಮಾನ ನೀಡಿ ತಮಗೆ ಮಾತ್ರ ಹೆಚ್ಚು ಘೋಷಿಸಿದ್ದಕ್ಕೆ ದ್ರಾವಿಡ್ ಬೇಸರಗೊಂಡಿದ್ದಾರೆ. ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಬಹುಮಾನ ನೀಡಬೇಕು ಎಂದು ಅವರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>ವಿಶ್ವಕಪ್ ಗೆದ್ದಿರುವುದರ ಹಿಂದೆ ಎಲ್ಲ ಸಿಬ್ಬಂದಿಯ ಶ್ರಮವಿದೆ. ಎಲ್ಲರೂ ಒಂದು ತಂಡವಾಗಿ ದುಡಿದಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ ಎನ್ನಲಾಗಿದೆ.</p>.<p>ವಿಶ್ವಕಪ್ ಫೈನಲ್ನಲ್ಲಿ ಜಯಗಳಿಸಿ ನ್ಯೂಜಿಲೆಂಡ್ನಿಂದ ಸ್ವದೇಶಕ್ಕೆ ಮರಳಿದ ಸಂದರ್ಭ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲೂ ದ್ರಾವಿಡ್ ‘ಇದು ಸಾಂಘಿಕ ಜಯ. ತೆರೆಯ ಹಿಂದೆ ಕೆಲಸ ಮಾಡಿದ ಎಲ್ಲ ಸಿಬ್ಬಂದಿಗೂ ಇದರ ಶ್ರೇಯ ಸಲ್ಲಬೇಕು’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>