ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಸದಸ್ಯರ ಆರೋಪಕ್ಕೆ ಸಚಿವರು ಉತ್ತರಿಸಿದರು.‘ಹಿಂದೂಗಳ ಹತ್ಯೆಯಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐ ಕೈವಾಡ ಇದೆ. ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಎರಡೂ ಕೈ ಸೇರದೇ ಚಪ್ಪಾಳೆ ಆಗದು. 13 ಮುಸ್ಲಿಮರ ಹತ್ಯೆ ಪ್ರಕರಣಗಳಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಭಾಗಿಯಾಗಿದೆ. ಈ ಕೊಲೆಗಳು ಕೂಡಾ ತಪ್ಪೇ. ಪಿಎಫ್ಐ, ಎಸ್ಡಿಪಿಐ ನಿಷೇಧಿಸಿದರೆ, ಸಂಘಪರಿವಾರವನ್ನೂ ನಿಷೇಧಿಸಬೇಕಾಗುತ್ತದೆ’ ಎಂದರು.